<p class="title"><strong>ಭೋಪಾಲ್ (ಪಿಟಿಐ): </strong>ಮಧ್ಯಪ್ರದೇಶದ ಚಂಬಲ್ ಮತ್ತು ಗ್ವಾಲಿಯರ್ ವಲಯದಲ್ಲಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ.</p>.<p class="title">ಪರಿಸ್ಥಿತಿ ಸುಧಾರಿಸುತ್ತಿದೆ. ಸದ್ಯ ಆತಂಕದ ಸ್ಥಿತಿ ಇಲ್ಲ. ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಡೆದಿದೆ. ಆಗಸ್ಟ್ 1 ರಿಂದ 7ರ ನಡುವೆ ಮಳೆ, ಪ್ರವಾಹ ಎದುರಾಗಿತ್ತು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಜ್ಞಾನೇಶ್ವರ್ ಪಾಟೀಲ್ ತಿಳಿಸಿದ್ದಾರೆ.</p>.<p>ಗ್ವಾಲಿಯರ್, ಶಿವಪುರಿ, ಶಿಯೊಪುರ್, ದಾಟಿಯಾ, ಅಶೋಕ್ ನಗರ, ಗುಣ, ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಮಳೆ, ಪ್ರವಾಹದ ಪರಿಣಾಮ ತೀವ್ರವಾಗಿತ್ತು. 1,250 ಗ್ರಾಮಗಳ ಇದರ ಪರಿಣಾಮಕ್ಕೆ ಗುರಿಯಾಗಿದ್ದವು ಎಂದು ತಿಳಿಸಿದರು.</p>.<p>ಈ ಮಧ್ಯೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರವಾಹ ಪೀಡಿತ ಪ್ರದೇಶಗಳಿಂದ 8,832 ಜನರನ್ನು ರಕ್ಷಿಸಲಾಗಿದ್ದು, 29,280 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p><a href="https://www.prajavani.net/india-news/ladakh-removes-inner-line-permit-restrictions-for-indian-citizens-855527.html" itemprop="url">ಲಡಾಖ್: ಸಂರಕ್ಷಿತ ಪ್ರದೇಶಗಳ ಭೇಟಿಗೆ ವಿಧಿಸಿದ್ದ ನಿರ್ಬಂಧಗಳ ತೆರವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಭೋಪಾಲ್ (ಪಿಟಿಐ): </strong>ಮಧ್ಯಪ್ರದೇಶದ ಚಂಬಲ್ ಮತ್ತು ಗ್ವಾಲಿಯರ್ ವಲಯದಲ್ಲಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ.</p>.<p class="title">ಪರಿಸ್ಥಿತಿ ಸುಧಾರಿಸುತ್ತಿದೆ. ಸದ್ಯ ಆತಂಕದ ಸ್ಥಿತಿ ಇಲ್ಲ. ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಡೆದಿದೆ. ಆಗಸ್ಟ್ 1 ರಿಂದ 7ರ ನಡುವೆ ಮಳೆ, ಪ್ರವಾಹ ಎದುರಾಗಿತ್ತು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಜ್ಞಾನೇಶ್ವರ್ ಪಾಟೀಲ್ ತಿಳಿಸಿದ್ದಾರೆ.</p>.<p>ಗ್ವಾಲಿಯರ್, ಶಿವಪುರಿ, ಶಿಯೊಪುರ್, ದಾಟಿಯಾ, ಅಶೋಕ್ ನಗರ, ಗುಣ, ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಮಳೆ, ಪ್ರವಾಹದ ಪರಿಣಾಮ ತೀವ್ರವಾಗಿತ್ತು. 1,250 ಗ್ರಾಮಗಳ ಇದರ ಪರಿಣಾಮಕ್ಕೆ ಗುರಿಯಾಗಿದ್ದವು ಎಂದು ತಿಳಿಸಿದರು.</p>.<p>ಈ ಮಧ್ಯೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರವಾಹ ಪೀಡಿತ ಪ್ರದೇಶಗಳಿಂದ 8,832 ಜನರನ್ನು ರಕ್ಷಿಸಲಾಗಿದ್ದು, 29,280 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p><a href="https://www.prajavani.net/india-news/ladakh-removes-inner-line-permit-restrictions-for-indian-citizens-855527.html" itemprop="url">ಲಡಾಖ್: ಸಂರಕ್ಷಿತ ಪ್ರದೇಶಗಳ ಭೇಟಿಗೆ ವಿಧಿಸಿದ್ದ ನಿರ್ಬಂಧಗಳ ತೆರವು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>