ಈ ಮಧ್ಯೆ, ‘ಜ. 26ರಂದು ರೈತರು ‘ಕಿಸಾನ್ ಗಣತಂತ್ರ ಪರೇಡ್’ ನಡೆಸಲಿದ್ದಾರೆ. ಬ್ಯಾರಿಕೇಡ್ಗಳನ್ನು ತೆರೆಯಲಾಗುತ್ತಿದ್ದು ನಾವು ದೆಹಲಿ ಪ್ರವೇಶಿಸಲಿದ್ದೇವೆ. ನಾವು (ರೈತರು ಮತ್ತು ದೆಹಲಿ ಪೊಲೀಸರು) ಒಪ್ಪಂದಕ್ಕೆ ಬಂದಿದ್ದು, ಪರೇಡ್ ಮಾರ್ಗದ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಂತಿಮ ರೂಪುರೇಷೆ ನಾಳೆಯೊಳಗೆ ಸಿದ್ಧವಾಗಲಿದೆ’ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.