‘ಉತ್ಸವವು ದೆಹಲಿಯ ಸಂಸ್ಕೃತಿ, ಸ್ಥಳೀಯ ಆಹಾರ ಸುತ್ತ ಕೇಂದ್ರೀಕೃತವಾಗಿರಲಿದ್ದು, ದೇಶ ಹಾಗೂ ವಿದೇಶದಿಂದ ಅತಿಥಿಗಳು ಬರಲಿದ್ದಾರೆ. ಹಾಗೆಯೇ ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಉತ್ಸವದ ಪ್ರಮುಖ ಅಂಶ. ಉತ್ಸವದ ಸಮಯದಲ್ಲಿದೆಹಲಿಗೆ ಭೇಟಿ ನೀಡಲು ಬಯಸುವವರಿಗೆ ವಿಶೇಷ ಪ್ಯಾಕೇಜ್ಗಳನ್ನು ಒದಗಿಸಲು ಸರ್ಕಾರವು ಹೋಟೆಲ್ಗಳು ಮತ್ತು ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಅಲ್ಲದೆ ಪ್ರದರ್ಶನದ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಇರುತ್ತವೆ’ ಎಂದು ಅವರು ಹೇಳಿದರು.