<p><strong>ನವದೆಹಲಿ:</strong> ನಗರದ ಸರ್ ಗಂಗಾರಾಮ್ ಆಸ್ಪತ್ರೆಗೆ ಭಾನುವಾರ 5 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಕೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಆಸ್ಪತ್ರೆಗೆ ಪೂರೈಕೆಯಾದ ಗರಿಷ್ಠ ಪ್ರಮಾಣ ಇದಾಗಿದೆ.</p>.<p>ಆಸ್ಪತ್ರೆಯ ಐಸಿಯುನಲ್ಲಿ 130 ರೋಗಿಗಳಿದ್ದು, ಈ ಪೈಕಿ 30 ಜನರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಶನಿವಾರ ರಾತ್ರಿ 10.30ಕ್ಕೆ ಹೇಳಿಕೆ ನೀಡಿದ್ದ ಆಸ್ಪತ್ರೆಯ ಆಡಳಿತ, ತನ್ನಲ್ಲಿರುವ ಆಮ್ಲಜನಕ ಒಂದು ಗಂಟೆವರೆಗೆ ಮಾತ್ರ ಸಾಕಾಗುತ್ತದೆ ಎಂದಿತ್ತು.</p>.<p>ನಂತರ, ಎಎಪಿ ಮುಖಂಡ ರಾಘವ್ ಛಡ್ಡಾ ಅವರ ಪ್ರಯತ್ನದಿಂದಾಗಿ ರಾತ್ರಿ 12.20ರ ವೇಳೆಗೆ ಒಂದು ಟ್ಯಾಂಕರ್ ಆಮ್ಲಜನಕ ಪೂರೈಕೆಯಾಯ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.</p>.<p>ನಂತರ, ‘ನಸುಕಿನ 4.15 ಗಂಟೆಗೆ 5 ಮೆಟ್ರಿಕ್ ಟನ್ ಆಮ್ಲಜನಕ ಆಸ್ಪತ್ರೆ ತಲುಪಿತು. ಇದು ಸಹ 11–12 ಗಂಟೆಗಳ ಅವಧಿಗೆ ಸಾಕಾಗಬಹುದು’ ಎಂದು ಆಸ್ಪತ್ರೆಯ ವಕ್ತಾರರೊಬ್ಬರು ಹೇಳಿದರು.</p>.<p>ಆಮ್ಲಜನಕ ಕೊರತೆ ಪರಿಣಾಮ, ತೀವ್ರ ಸೋಂಕಿದ್ದ 25 ರೋಗಿಗಳು ಆಸ್ಪತ್ರೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದರು.</p>.<p>‘ತುರ್ತಾಗಿ ನೆರವು ನೀಡಬೇಕು ಎಂದು ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಆಸ್ಪತ್ರೆಯ ಚೇರಮನ್ ಡಾ.ಡಿ.ಎಸ್.ರಾಣಾ ಹೇಳಿದರು.</p>.<p>‘ಸರ್ಕಾರ ಒಂದೆಡೆ ಕೋವಿಡ್ ರೋಗಿಗಳಿಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇನ್ನೊಂದೆಡೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯ ನಿರ್ವಹಿಸಬೇಕು’ ಎಂದೂ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನಗರದ ಸರ್ ಗಂಗಾರಾಮ್ ಆಸ್ಪತ್ರೆಗೆ ಭಾನುವಾರ 5 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಕೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಆಸ್ಪತ್ರೆಗೆ ಪೂರೈಕೆಯಾದ ಗರಿಷ್ಠ ಪ್ರಮಾಣ ಇದಾಗಿದೆ.</p>.<p>ಆಸ್ಪತ್ರೆಯ ಐಸಿಯುನಲ್ಲಿ 130 ರೋಗಿಗಳಿದ್ದು, ಈ ಪೈಕಿ 30 ಜನರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಶನಿವಾರ ರಾತ್ರಿ 10.30ಕ್ಕೆ ಹೇಳಿಕೆ ನೀಡಿದ್ದ ಆಸ್ಪತ್ರೆಯ ಆಡಳಿತ, ತನ್ನಲ್ಲಿರುವ ಆಮ್ಲಜನಕ ಒಂದು ಗಂಟೆವರೆಗೆ ಮಾತ್ರ ಸಾಕಾಗುತ್ತದೆ ಎಂದಿತ್ತು.</p>.<p>ನಂತರ, ಎಎಪಿ ಮುಖಂಡ ರಾಘವ್ ಛಡ್ಡಾ ಅವರ ಪ್ರಯತ್ನದಿಂದಾಗಿ ರಾತ್ರಿ 12.20ರ ವೇಳೆಗೆ ಒಂದು ಟ್ಯಾಂಕರ್ ಆಮ್ಲಜನಕ ಪೂರೈಕೆಯಾಯ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.</p>.<p>ನಂತರ, ‘ನಸುಕಿನ 4.15 ಗಂಟೆಗೆ 5 ಮೆಟ್ರಿಕ್ ಟನ್ ಆಮ್ಲಜನಕ ಆಸ್ಪತ್ರೆ ತಲುಪಿತು. ಇದು ಸಹ 11–12 ಗಂಟೆಗಳ ಅವಧಿಗೆ ಸಾಕಾಗಬಹುದು’ ಎಂದು ಆಸ್ಪತ್ರೆಯ ವಕ್ತಾರರೊಬ್ಬರು ಹೇಳಿದರು.</p>.<p>ಆಮ್ಲಜನಕ ಕೊರತೆ ಪರಿಣಾಮ, ತೀವ್ರ ಸೋಂಕಿದ್ದ 25 ರೋಗಿಗಳು ಆಸ್ಪತ್ರೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದರು.</p>.<p>‘ತುರ್ತಾಗಿ ನೆರವು ನೀಡಬೇಕು ಎಂದು ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಆಸ್ಪತ್ರೆಯ ಚೇರಮನ್ ಡಾ.ಡಿ.ಎಸ್.ರಾಣಾ ಹೇಳಿದರು.</p>.<p>‘ಸರ್ಕಾರ ಒಂದೆಡೆ ಕೋವಿಡ್ ರೋಗಿಗಳಿಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇನ್ನೊಂದೆಡೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯ ನಿರ್ವಹಿಸಬೇಕು’ ಎಂದೂ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>