ದೆಹಲಿಯ ಸಿಬಿಐ ತಂಡವು ಆರೋಪಿಗಳಾದ ಆಟೋರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಜತೆಗಾರ ರಾಹುಲ್ ವರ್ಮಾ ಅವರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಸಿಬಿಐನ ವಿಶೇಷ ಮ್ಯಾಜಿಸ್ಟ್ರೇಟ್ ಅಭಿಷೇಕ್ ಶ್ರೀವಾಸ್ತವ ಅವರ ಎದುರು ಹಾಜರುಪಡಿಸಿತ್ತು. ಸಿಬಿಐನ ಮನವಿಯನ್ನು ಆಲಿಸಿದ ನ್ಯಾಯಾಲಯವು ಲಖನ್ ಮತ್ತು ರಾಹುಲ್ ಅವರನ್ನು ಧನ್ಬಾದ್ ಜೈಲಿಗೆ ಕಳುಹಿಸಲು ಆದೇಶಿಸಿತು.