‘ನಾನು ಸಂಸ್ಥೆಯನ್ನು ಹಿರಿಯ ವಸತಿ ವೈದ್ಯರ ನೆಲೆಯಲ್ಲಿ ಸೇರಿಕೊಂಡಿದ್ದೆ.ಆಗ ನನಗೆ ಖಾಸಗಿ ವೈದ್ಯ ಸೇವೆ ಮಾಡುವುದು ಸಾಧ್ಯವಿರಲಿಲ್ಲ. ನನಗೆ ಈಗ ಬಡ್ತಿ ಸಿಕ್ಕಿದ್ದು, ನಾನು ಈಗ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಸಲ್ಲಿಸಬಹುದು. ಹೀಗಾಗಿ ನನ್ನ ಕರ್ತವ್ಯವ ಅವಧಿಯ ಬಳಿಕ ಬಡವರಿಗೆ ಆರೈಕೆ ಮಾಡುವ ಉದ್ದೇಶದಿಂದ ಒಂದು ರೂಪಾಯಿ ಕ್ಲಿನಿಕ್ ತೆರೆದಿದ್ದೇನೆ’ ಎಂದು ಶಂಕರ್ ತಿಳಿಸಿದರು.