ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಪ್ರತಿ ಸಭೆ ಆರಂಭದಲ್ಲಿ ಕೋವಿಡ್ ಸೋಂಕಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಿಬ್ಬಂದಿಯಲ್ಲಿ ಅರಿವು ಮೂಡಿಸಬೇಕು ಎಂದು ಸಿಬ್ಬಂದಿ ಸುಧಾರಣಾ ಸಚಿವಾಲಯ ಆದೇಶಿಸಿದೆ.
ಕೋವಿಡ್ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಸಚಿವಾಲಯವು ತಿಳಿಸಿದೆ.
ಕೇಂದ್ರ ಎಲ್ಲಾ ಇಲಾಖೆಗಳು ಪ್ರತಿ ಸಭೆಯ ಪ್ರಾರಂಭದಲ್ಲಿ ಮುಖಗವಸು ಧರಿಸವುದು, ವೈಯಕ್ತಿಕ ಅಂತರ, ಶುಚಿತ್ವ ಕುರಿತ ಮಾಹಿತಿಯನ್ನು ನೀಡಬೇಕು ಎಂದು ಅದು ಸೂಚಿಸಿದೆ.