ಬಿಗಿ ಭದ್ರತೆಯಲ್ಲಿ ಐಷರಾಮಿ ಹೋಟೆಲ್ನಿಂದ ಬಸ್ನಲ್ಲಿ ವಿಧಾನ ಭವನ ಆವರಣ ಪ್ರವೇಶಿಸಿದ ಶಿವ ಸೇನಾ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯ, ’ಕಸಬ್ಗೂ ಇಷ್ಟೊಂದು ಭದ್ರತೆ ಇರಲಿಲ್ಲ. ಈ ರೀತಿ ಭದ್ರತೆ ಮುಂಬೈನಲ್ಲಿ ನಾವು ನೋಡಿರಲಿಲ್ಲ. ಯಾಕೆ ಹೆದರುತ್ತೀರಾ? ಯಾರಾದರೂ ಓಡಿ ಹೋಗುತ್ತಾರೆಯೇ? ಯಾಕಿಷ್ಟು ಭಯ?‘ ಎಂದು ಪ್ರಶ್ನಿಸಿದರು.