‘ಕೆಎಫ್ಸಿ ರೆಸ್ಟೋರೆಂಟ್ನಿಂದ ಆರಂಭವಾದ ಮಾಜಿ ಸೈನಿಕರ ಪಥಸಂಚಲನ ಸಿಂಘು ಗಡಿಯಲ್ಲಿರುವ ಪ್ರಧಾನ ವೇದಿಕೆಯವರೆಗೆ ಮುಂದುವರಿಯಿತು. ಗಡಿಯಲ್ಲಿ ಪ್ರತಿಭಟನನಿರತ ರೈತರು ಈ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿನ’ ಎಂದು ಆಚರಿಸಿದರು. ಈ ಭಾಗದಲ್ಲಿ ಜನರು ರೈತರಿಗೆ ಬೆಂಬಲ ಸೂಚಿಸಲು ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಿದರು. ಅಂತೆಯೇ ಟಿಕ್ರಿ ಗಡಿಯಲ್ಲೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು’ ಎಂದೂ ಅವರು ಹೇಳಿದ್ದಾರೆ.