ಈ ಬಗ್ಗೆ ಮಾತನಾಡಿರುವ ವೈಲ್ಡ್ಲೈವ್ ಎಸ್ಒಎಸ್ನ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ್, ‘ಹಾವನ್ನು ನಿಭಾಯಿಸುವುದು ಸವಾಲಿನ ವಿಚಾರ. ಆದರೆ, ನಮ್ಮ ತಂಡಕ್ಕೆ ಇಂತಹ ಸೂಕ್ಷ್ಮ ಕಾರ್ಯಾಚರಣೆ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಇಲ್ಲಿನ ಕಷ್ಟಕರವಾದ ಸನ್ನಿವೇಶದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರದಾಡುವ ಸರಿಸೃಪಗಳಿಗೆ ಈ ಹೆಬ್ಬಾವು ಉತ್ತಮ ಉದಾಹರಣೆಯಾಗಿದೆ’ ಎಂದು ಹೇಳಿದ್ದಾರೆ.