ಪ್ರವಾಹದಿಂದಾಗಿ ಸುಮಾರು 31 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇವರಲ್ಲಿ 1. 56 ಲಕ್ಷ ಮಂದಿ ರಾಜ್ಯದ 514 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರು ಮತ್ತು ಎಎಸ್ಡಿಎಂಎ ಸ್ವಯಂಸೇವಕರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದುವರೆಗೆ 20,983 ಜನರನ್ನು ಸ್ಥಳಾಂತರಿಸಲಾಗಿದೆಎಂದುವರದಿಹೇಳಿದೆ.