ಕಲ್ಯಾಣ್ ಸಿಂಗ್ ಅವರ ಮೊದಲ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಆದಿತ್ಯನಾಥ್, ಸ್ವಾತಂತ್ರ್ಯದ ನಂತರ ನಮ್ಮ ನೆನಪಿನಲ್ಲಿ ಮೂಡುವ ಉತ್ತಮ ಆಡಳಿತದ ಮೊದಲ ಸರ್ಕಾರವೆಂದರೆ 'ಬಾಬೂಜಿ' ಕಲ್ಯಾಣ್ ಸಿಂಗ್ ಅವರದ್ದು. 1991ರಲ್ಲಿ ಕಲ್ಯಾಣ್ ಸಿಂಗ್ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗದ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಿತು. ರಾಜ್ಯದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ಅಚ್ಚಳಿಯದೇ ಉಳಿಯುವಂತೆ ಕೆಲಸ ಮಾಡಿದರು ಎಂದು ಹೇಳಿದರು.