ನವದೆಹಲಿ: ಗಿರೀಶ್ಚಂದ್ರ ಮುರ್ಮು ಅವರನ್ನು ದೇಶದ ನೂತನ ಮಹಾಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರನ್ನಾಗಿ (ಸಿಎಜಿ) ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ.
ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮುರ್ಮು, ಬುಧವಾರವಷ್ಟೆ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಸ್ತುತ ಸಿಎಜಿ ಆಗಿರುವ ರಾಜೀವ್ ಮೆಹ್ರಿಷಿ ಅವರಿಗೆ ಆಗಸ್ಟ್ 8ರಂದು 65 ವರ್ಷ ತುಂಬಲಿದ್ದು, ಅವರು ಈ ಹುದ್ದೆಯಿಂದ ನಿವೃತ್ತರಾಗುವರು.