ಪಣಜಿ: ಬಿಜೆಪಿ ಜತೆಗೆ ಇದ್ದ ಸಖ್ಯದಿಂದಾಗಿ ಗೋವಾದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಬಿಜೆಪಿ ಬೆನ್ನಿಗೆ ಇರಿಯಿತು. ಹಾಗಾಗಿ, ಇನ್ನು ಮುಂದೆ ಗೋವಾದ ಎಲ್ಲ ಚುನಾವಣೆಗಳಲ್ಲಿಯೂ ಶಿವಸೇನಾ ಸ್ಪರ್ಧಿಸಲಿದೆ. ಪಂಚಾಯಿತಿಯಿಂದ ಲೋಕಸಭೆವರೆಗೆ ಎಲ್ಲ ಚುನಾವಣೆಗಳಲ್ಲಿಯೂ ಕಣಕ್ಕೆ ಇಳಿಯಲಿದೆ ಎಂದು ಪಕ್ಷದ ಮುಖಂಡ ಆದಿತ್ಯ ಠಾಕ್ರೆ ಅವರು ಶನಿವಾರ ಹೇಳಿದ್ದಾರೆ.