<p class="title"><strong>ಪಟ್ನಾ</strong>:ಬಿಜೆಪಿ ನೇತೃತ್ವದ ಎನ್ಡಿಎಯಲ್ಲಿದ್ದಾಗ ಜೆಡಿಯು ಒತ್ತಾಯಿಸುತ್ತಿದ್ದ ಸಮನ್ವಯ ಸಮಿತಿಯನ್ನು, ಬಿಹಾರದಲ್ಲಿ ಸದ್ಯದ ‘ಮಹಾಘಟಬಂಧನ್’ (ಮಹಾಮೈತ್ರಿಕೂಟ) ಸುಗಮವಾಗಿ ಕಾರ್ಯನಿರ್ವಹಿಸಲುಮುಖ್ಯಮಂತ್ರಿ ನಿತೀಶ್ ಕುಮಾರ್ ರಚಿಸುವ ಸಾಧ್ಯತೆ ಇದೆ.</p>.<p class="title">ಮಹಾಮೈತ್ರಿಕೂಟದ ಸಿಪಿಐ (ಎಂಎಲ್) ಶಾಸಕರು ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಸೂಚನೆ ದೊರೆತಿದೆ.</p>.<p class="title">‘ಮುಖ್ಯಮಂತ್ರಿ ಸಮನ್ವಯ ಸಮಿತಿ ಪರವಾಗಿದ್ದಾರೆ. ನಮಗೂ ಹಾಗೆಯೇ ಅನಿಸಿತು. ಯಾವುದೇ ಮಿತ್ರ ಪಕ್ಷ ಆಕ್ಷೇಪಣೆ ಹೊಂದಿಲ್ಲ. ಆದ್ದರಿಂದ, ಸರಿಯಾದ ಸಮಯದಲ್ಲಿ ನಿರ್ಧಾರ ಬರಬಹುದು’ ಎಂದು ಸಿಪಿಐ (ಎಂಎಲ್) ಶಾಸಕ ಸಂದೀಪ್ ಸೌರವ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಪ್ರಸ್ತುತ ಮಹಾಮೈತ್ರಿಕೂಟ ಏಳು ಪಕ್ಷಗಳನ್ನು ಒಳಗೊಂಡಿದೆ. ಜೆಡಿ (ಯು), ಆರ್ಜೆಡಿ, ಕಾಂಗ್ರೆಸ್, ಸಿಪಿಐ (ಎಂಎಲ್), ಸಿಪಿಐ, ಸಿಪಿಎಂ ಮತ್ತು ಎಚ್ಎಎಂ. 243 ಬಲದ ವಿಧಾನಸಭೆಯಲ್ಲಿ 160 ಕ್ಕೂ ಹೆಚ್ಚು ಶಾಸಕರನ್ನು ಈ ಮೈತ್ರಿಕೂಟ ಹೊಂದಿದೆ.</p>.<p>ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಕೂಡ ಸಮನ್ವಯ ಸಮಿತಿ ರಚನೆಗೆ ಆಗ್ರಹಿಸಿದ್ದರು.</p>.<p>ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಯ ನಂತರಮುಖ್ಯಮಂತ್ರಿ ಮುಂದಿನ ವಾರ ನವದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಕುಮಾರ್ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪಟ್ನಾ</strong>:ಬಿಜೆಪಿ ನೇತೃತ್ವದ ಎನ್ಡಿಎಯಲ್ಲಿದ್ದಾಗ ಜೆಡಿಯು ಒತ್ತಾಯಿಸುತ್ತಿದ್ದ ಸಮನ್ವಯ ಸಮಿತಿಯನ್ನು, ಬಿಹಾರದಲ್ಲಿ ಸದ್ಯದ ‘ಮಹಾಘಟಬಂಧನ್’ (ಮಹಾಮೈತ್ರಿಕೂಟ) ಸುಗಮವಾಗಿ ಕಾರ್ಯನಿರ್ವಹಿಸಲುಮುಖ್ಯಮಂತ್ರಿ ನಿತೀಶ್ ಕುಮಾರ್ ರಚಿಸುವ ಸಾಧ್ಯತೆ ಇದೆ.</p>.<p class="title">ಮಹಾಮೈತ್ರಿಕೂಟದ ಸಿಪಿಐ (ಎಂಎಲ್) ಶಾಸಕರು ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಈ ಸೂಚನೆ ದೊರೆತಿದೆ.</p>.<p class="title">‘ಮುಖ್ಯಮಂತ್ರಿ ಸಮನ್ವಯ ಸಮಿತಿ ಪರವಾಗಿದ್ದಾರೆ. ನಮಗೂ ಹಾಗೆಯೇ ಅನಿಸಿತು. ಯಾವುದೇ ಮಿತ್ರ ಪಕ್ಷ ಆಕ್ಷೇಪಣೆ ಹೊಂದಿಲ್ಲ. ಆದ್ದರಿಂದ, ಸರಿಯಾದ ಸಮಯದಲ್ಲಿ ನಿರ್ಧಾರ ಬರಬಹುದು’ ಎಂದು ಸಿಪಿಐ (ಎಂಎಲ್) ಶಾಸಕ ಸಂದೀಪ್ ಸೌರವ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಪ್ರಸ್ತುತ ಮಹಾಮೈತ್ರಿಕೂಟ ಏಳು ಪಕ್ಷಗಳನ್ನು ಒಳಗೊಂಡಿದೆ. ಜೆಡಿ (ಯು), ಆರ್ಜೆಡಿ, ಕಾಂಗ್ರೆಸ್, ಸಿಪಿಐ (ಎಂಎಲ್), ಸಿಪಿಐ, ಸಿಪಿಎಂ ಮತ್ತು ಎಚ್ಎಎಂ. 243 ಬಲದ ವಿಧಾನಸಭೆಯಲ್ಲಿ 160 ಕ್ಕೂ ಹೆಚ್ಚು ಶಾಸಕರನ್ನು ಈ ಮೈತ್ರಿಕೂಟ ಹೊಂದಿದೆ.</p>.<p>ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಕೂಡ ಸಮನ್ವಯ ಸಮಿತಿ ರಚನೆಗೆ ಆಗ್ರಹಿಸಿದ್ದರು.</p>.<p>ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಯ ನಂತರಮುಖ್ಯಮಂತ್ರಿ ಮುಂದಿನ ವಾರ ನವದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಕುಮಾರ್ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>