<p><strong>ನವರಾಸಿ (ಗುಜರಾತ್):</strong> ಪ್ರತಿಭಟನೆಯೊಂದರ ವೇಳೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹರಿದು ಹಾಕಿದ್ದ ಕಾಂಗ್ರೆಸ್ ಶಾಸಕನಿಗೆ ಇಲ್ಲಿನ ನ್ಯಾಯಲಯವೊಂದು ₹ 99 ದಂಡ ವಿಧಿಸಿದೆ.</p>.<p>ಅನಂತ್ ಪಟೇಲ್ ಎಂಬವರೇ ಈ ದಂಡ ಶಿಕ್ಷೆಗೆ ಒಳಗಾದವರು. ಅವರು ವಾಂಡ್ಸಾ ಕ್ಷೇತ್ರದ ಶಾಸಕರಾಗಿದ್ದಾರೆ.</p>.<p>2017ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅನಂತ್ ಪಟೇಲ್ ಅವರು, ಕುಲಪತಿಗಳ ಕೊಠಡಿಗೆ ಪ್ರವೇಶಿಸಿ, ಮೇಜಿನ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದರು.</p>.<p>ಘಟನೆ ಸಂಬಂಧ ಪಟೇಲ್ ಹಾಗೂ ಇನ್ನಿತರ 6 ಮಂದಿಯ ವಿರುದ್ಧ ಐಪಿಸಿಯ 143. 353,427, 447 ಹಾಗೂ 447ರಡಿ ಜಾಲಾಪೋರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<p>ಪ್ರಕರಣದಲ್ಲಿ ಪಟೇಲ್ ಅವರು ಐಪಿಸಿಯ 447ನೇ ವಿಧಿ ಅನ್ವಯ (ಅಕ್ರಮ ಪ್ರವೇಶ) ತಪ್ಪಿತಸ್ಥ ಎಂದು ನ್ಯಾಯಮೂರ್ತಿ ವಿ.ಎ ದದ್ದಲ್ ಅವರು ತೀರ್ಪು ನೀಡಿದ್ದಾರೆ.</p>.<p>ಮೂರು ಮಂದಿ ತಪ್ಪಿತಸ್ಥರು ಎಂದಿರುವ ನ್ಯಾಯಾಲಯವು ತಲಾ ₹ 99 ದಂಡ ವಿಧಿಸಿದೆ. ಪಾವತಿಸಲು ವಿಫಲವಾಗಿದ್ದೇ ಆದಲ್ಲಿ 7 ದಿನಗಳ ಸಾಮಾನ್ಯ ಸಜೆ ಅನುಭವಿಸಬೇಕು ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವರಾಸಿ (ಗುಜರಾತ್):</strong> ಪ್ರತಿಭಟನೆಯೊಂದರ ವೇಳೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹರಿದು ಹಾಕಿದ್ದ ಕಾಂಗ್ರೆಸ್ ಶಾಸಕನಿಗೆ ಇಲ್ಲಿನ ನ್ಯಾಯಲಯವೊಂದು ₹ 99 ದಂಡ ವಿಧಿಸಿದೆ.</p>.<p>ಅನಂತ್ ಪಟೇಲ್ ಎಂಬವರೇ ಈ ದಂಡ ಶಿಕ್ಷೆಗೆ ಒಳಗಾದವರು. ಅವರು ವಾಂಡ್ಸಾ ಕ್ಷೇತ್ರದ ಶಾಸಕರಾಗಿದ್ದಾರೆ.</p>.<p>2017ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅನಂತ್ ಪಟೇಲ್ ಅವರು, ಕುಲಪತಿಗಳ ಕೊಠಡಿಗೆ ಪ್ರವೇಶಿಸಿ, ಮೇಜಿನ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದರು.</p>.<p>ಘಟನೆ ಸಂಬಂಧ ಪಟೇಲ್ ಹಾಗೂ ಇನ್ನಿತರ 6 ಮಂದಿಯ ವಿರುದ್ಧ ಐಪಿಸಿಯ 143. 353,427, 447 ಹಾಗೂ 447ರಡಿ ಜಾಲಾಪೋರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<p>ಪ್ರಕರಣದಲ್ಲಿ ಪಟೇಲ್ ಅವರು ಐಪಿಸಿಯ 447ನೇ ವಿಧಿ ಅನ್ವಯ (ಅಕ್ರಮ ಪ್ರವೇಶ) ತಪ್ಪಿತಸ್ಥ ಎಂದು ನ್ಯಾಯಮೂರ್ತಿ ವಿ.ಎ ದದ್ದಲ್ ಅವರು ತೀರ್ಪು ನೀಡಿದ್ದಾರೆ.</p>.<p>ಮೂರು ಮಂದಿ ತಪ್ಪಿತಸ್ಥರು ಎಂದಿರುವ ನ್ಯಾಯಾಲಯವು ತಲಾ ₹ 99 ದಂಡ ವಿಧಿಸಿದೆ. ಪಾವತಿಸಲು ವಿಫಲವಾಗಿದ್ದೇ ಆದಲ್ಲಿ 7 ದಿನಗಳ ಸಾಮಾನ್ಯ ಸಜೆ ಅನುಭವಿಸಬೇಕು ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>