‘ಅವರು ನಮ್ಮ ದುರ್ಗಾ ಮಾತೆ. ಅವರ ಎಂಟು ಕೈಗಳು, ವಲಸೆ ಕಾರ್ಮಿಕರು ಅನುಭವಿಸಿದ ನೋವು, ತೊಂದರೆಗಳನ್ನು ಪ್ರತಿಬಿಂಬಿಸುತ್ತದೆ. ವ್ಯಾಪಾರ ವ್ಯವಹಾರಗಳು, ರಸ್ತೆ ಸಾರಿಗೆಗಳು ಸ್ಥಗಿತಗೊಂಡ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ಹಲವು ಕಾರ್ಮಿಕರು ಮನೆಗಳಿಗೆ ನಡೆದುಕೊಂಡೇ ಸಾಗಿದರು. ವಲಸೆ ಕಾರ್ಮಿಕರು ನೋವಿನಿಂದ ಕುಸಿದರೂ, ತಮ್ಮೆಲ್ಲ ಧೈರ್ಯವನ್ನು ಒಗ್ಗೂಡಿಸಿ ಮತ್ತೆ ಮೇಲೇಳಲು ಪ್ರಯತ್ನಿಸುತ್ತಿದ್ದಾರೆ. ಇದು ಅವರಿಗಾಗಿ ನಮ್ಮ ಗೌರವ’ ಎಂದು ಸಮಿತಿಯ ವಕ್ತಾರರು ತಿಳಿಸಿದರು.