‘ಶೀಘ್ರದಲ್ಲೇ ನಾವು ಆದೇಶವನ್ನು ಹೊರಡಿಸುತ್ತೇವೆ. ಆದರೆ, ಇಂದೇ(ಶನಿವಾರ) ಆದೇಶ ಹೊರಡಿಸುವುದು ಸಾಧ್ಯವಿಲ್ಲ. ತೀರ್ಪು ಕಾಯ್ದಿರಿಸಿರುವುದು ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಎಂ.ಎಸ್.ಕಾರ್ಣಿಕ್ ಅವರಿದ್ದ ಪೀಠವು ಹೇಳಿತು. ಅರ್ನಬ್ ಅವರ ಜೊತೆಗೆ ಇತರೆ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನೂ ಪೀಠ ಕಾಯ್ದಿರಿಸಿದೆ.