ಚೆನ್ನೈ: ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 26ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರ ಶನಿವಾರ ತಿಳಿಸಿದೆ.
ಚೆನ್ನೈನಲ್ಲಿ ಇಬ್ಬರು ಮತ್ತು ತಿರುವಳ್ಳೂರು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.
ನಾಗಪಟ್ಟಿನಂ ಜಿಲ್ಲೆಯ ಕೊಡಿಯಕಾರೈನಲ್ಲಿ ಅತಿ ಹೆಚ್ಚು ಅಂದರೆ, 9 ಸೆಂ.ಮೀ ಮಳೆಯಾಗಿದೆ. ರಾಮೇಶ್ವರಂನಲ್ಲಿ 8 ಸೆಂ.ಮೀ ಮಳೆ ಸುರಿದಿದೆ.
ಭಾರಿ ಮಳೆಯಿಂದಾಗಿ ಸುಮಾರು 25 ಜಾನುವಾರುಗಳು ಕಾಣೆಯಾಗಿವೆ. ಸುಮಾರು 140 ಮನೆಗಳಿಗೆ ಹಾನಿಯಾಗಿದೆ.ಚೆನ್ನೈನಲ್ಲಿ ಧರೆಗುರುಳಿದ್ದ ಸುಮಾರು 64 ಮರಗಳನ್ನು ತೆರವುಗೊಳಿಸಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.