ಕೇಂದ್ರಾಡಳಿತ ಪ್ರದೇಶದ ಜನರ ನೋವು ನನಗೆ ಅರ್ಥವಾಗುತ್ತದೆ. ಪ್ರೀತಿ ಮತ್ತು ಗೌರವದ ಮೂಲಕ ಸಂಬಂಧವನ್ನು ಕಟ್ಟಿಕೊಡಲು ನಾನು ನಿಮ್ಮೊಂದಿಗೆ ಇರುತ್ತೇನೆ’ ಎಂದ ಅವರು, ‘ಭಾರತವನ್ನು ಒಡೆಯುವ ಜತೆಗೆ ಹಿಂಸೆಯನ್ನು ಬೋಧಿಸುವ ಮೋದಿ ಅವರ ಸಿದ್ಧಾಂತದ ವಿರುದ್ಧ ನಾನು ಹೋರಾಡುತ್ತೇನೆ. ರಫೇಲ್, ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಯವರು ನ್ಯಾಯಾಂಗ ವ್ಯವಸ್ಥೆ, ಲೋಕಸಭೆ ಅಷ್ಟೇ ಏಕೆ ಮಾಧ್ಯಮಗಳ ಧ್ವನಿಯನ್ನೂ ಅಡಗಿಸಿದ್ದಾರೆ’ ಎಂದು ರಾಹುಲ್ ಟೀಕಿಸಿದರು.