ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಟಿ.ಎಸ್.ತಿರುಮೂರ್ತಿ ಅವರು ಯುಎನ್ಒಎಸ್ಎಸ್ಸಿ ನಿರ್ದೇಶಕ ಜಾರ್ಜ್ ಚೆಡಿಕ್ ಅವರಿಗೆ ಮಂಗಳವಾರ ಈ ಚೆಕ್ ಹಸ್ತಾಂತರಿಸಿದರು. ನಿಧಿಯನ್ನು ಯುಎನ್ಒಎಸ್ಎಸ್ಸಿ ನಿರ್ವಹಣೆ ಮಾಡುತ್ತಿದ್ದು, ಅಭಿವೃದ್ಧಿ ಹೊಂದುತ್ತಿರುವ ಪಾಲುದಾರ ರಾಷ್ಟ್ರಗಳ ನಾಯಕತ್ವದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ.