‘ಹಾಡುಗಳು, ಶ್ಲೋಕಗಳು ಮತ್ತು ಸಣ್ಣ ಕಥೆಗಳ ರೂಪದಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಧರಿಸಿಯೇ ಈ ಕೋರಿಕೆಯನ್ನು ಮಂಡಿಸಲಾಗಿದೆ. ಪ್ರಾಥಮಿಕ ಶಾಲೆಯಿಂದಲೇ ಸಂಸ್ಕೃತವನ್ನು ಪರಿಚಯಿಸಬೇಕು ಎಂದು ನಾವು ಗುಜರಾತ್ ಸರ್ಕಾರವನ್ನು ಕೋರಿದ್ದೇವೆ’ ಎಂದು ಸಂಸ್ಕೃತ ಭಾರತಿಯ ಗುಜರಾತ್ ರಾಜ್ಯದ ಕಾರ್ಯದರ್ಶಿ ಹಿಮಾಂಜಯ್ ಪಾಲಿವಾಲ್ ತಿಳಿಸಿದ್ದಾರೆ.