<p><strong>ನವದೆಹಲಿ:</strong> ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.</p>.<p>ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ (71) ಅವರಿಗೆ ಪ್ರಮಾಣ ವಚನ ಬೋಧಿಸಿದರು.</p>.<p>ಧನಖರ್ ಅವರು ಹಿಂದಿಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.</p>.<p>ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಿರ್ಗಮಿತ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>.<p>ಭಾರತದ ಉಪ ರಾಷ್ಟ್ರಪತಿಯು ರಾಜ್ಯಸಭೆ ಸಭಾಧ್ಯಕ್ಷರಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.</p>.<p>ಉಪ ರಾಷ್ಟ್ರಪತಿ ಹುದ್ದೆಯು ದೇಶದಲ್ಲಿ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಎನಿಸಿಕೊಂಡಿದೆ. ಒಂದು ವೇಳೆ ರಾಷ್ಟ್ರಪತಿಯ ಸ್ಥಾನ ತೆರವಾದರೆ ಹೊಸಬರ ಆಯ್ಕೆ ಆಗುವವರೆಗೆ ತಾತ್ಕಾಲಿಕವಾಗಿ ಆ ಸ್ಥಾನವನ್ನು ಉಪ ರಾಷ್ಟ್ರಪತಿಗಳು ನಿಭಾಯಿಸುತ್ತಾರೆ.</p>.<p>ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.</p>.<p>ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.</p>.<p>ಧನಕರ್ ಅವರು ಹುಟ್ಟಿದ್ದು 1951ರಲ್ಲಿ. ಜೈಪುರದ ಮಹಾರಾಜ ಕಾಲೇಜಿನಿಂದ ಭೌತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಜೈಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಅವರ ಪತ್ನಿಯ ಹೆಸರು ಸುದೇಶ್ ಧನಕರ್ ಮತ್ತು ಅವರಿಗೆ ಒಬ್ಬಳು ಮಗಳಿದ್ದಾರೆ.</p>.<p>ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್ ಅವರು 1989ರಲ್ಲಿ ರಾಜಕೀಯಕ್ಕೆ ಬಂದರು. ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1990ರಲ್ಲಿ ಕೇಂದ್ರ ಸಚಿವರೂ ಆದರು. ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.</p>.<p>1993ರಿಂದ 1998ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ಜನತಾ ದಳದಿಂದ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ಕಾಂಗ್ರೆಸ್ ಸೇರಿದ್ದರು. 2003ರಲ್ಲಿ ಅವರು ಬಿಜೆಪಿ ಸೇರಿದರು.</p>.<p>2019ರಲ್ಲಿ ಪಶ್ಚಿಮ ಬಂಗಾಳದರಾಜ್ಯಪಾಲರಾಗಿ ಅವರನ್ನು ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗಿನ ತಿಕ್ಕಾಟದಿಂದಲೇ ಆಗಾಗ ಸುದ್ದಿಯಾಗುತ್ತಿದ್ದರು.</p>.<p>ಉಪ ರಾಷ್ಟ್ರಪತಿ ಹುದ್ದೆಗೆಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಚುನಾವಣೆಯಲ್ಲಿ ಮಣಿಸಿದ್ದರು.</p>.<p><strong>ಇವುಗಳನ್ನೂ ಓದಿ...</strong></p>.<p><a href="https://www.prajavani.net/india-news/pm-modi-congratulates-dhankharsays-proud-moment-for-india-to-have-kisan-putra-vp-961087.html" itemprop="url">ರೈತನ ಮಗ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶಕ್ಕೆ ಹೆಮ್ಮೆಯ ಕ್ಷಣ: ಪ್ರಧಾನಿ </a></p>.<p><a href="https://www.prajavani.net/india-news/vice-president-election-who-is-the-jagdeep-dhankhar-955219.html" itemprop="url">ಉಪರಾಷ್ಟ್ರಪತಿ ಚುನಾವಣೆ:NDA ಅಭ್ಯರ್ಥಿ ಜಗದೀಪ್ ಧನಕರ್ ಬಗ್ಗೆ ನಿಮಗೆಷ್ಟು ಗೊತ್ತು? </a></p>.<p><a href="https://www.prajavani.net/india-news/dhankhars-knowledge-of-ground-problems-constitution-to-be-beneficial-to-country-amit-shah-955215.html" itemprop="url">ಧನಕರ್ ಅವರ ಸಾಂವಿಧಾನಿಕ ಜ್ಞಾನದಿಂದ ದೇಶಕ್ಕೆ ಪ್ರಯೋಜನ: ಅಮಿತ್ ಶಾ </a></p>.<p><a href="https://www.prajavani.net/op-ed/analysis/west-bengal-governor-jagdeep-dhankhar-cm-mamata-banerjee-tmc-politics-democracy-943955.html" itemprop="url">ವಿಶ್ಲೇಷಣೆ | ರಾಜ್ಯಪಾಲ: ಕೇಂದ್ರವೇ ನೇಮಿಸಬೇಕೆ? </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.</p>.<p>ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ (71) ಅವರಿಗೆ ಪ್ರಮಾಣ ವಚನ ಬೋಧಿಸಿದರು.</p>.<p>ಧನಖರ್ ಅವರು ಹಿಂದಿಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.</p>.<p>ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಿರ್ಗಮಿತ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>.<p>ಭಾರತದ ಉಪ ರಾಷ್ಟ್ರಪತಿಯು ರಾಜ್ಯಸಭೆ ಸಭಾಧ್ಯಕ್ಷರಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.</p>.<p>ಉಪ ರಾಷ್ಟ್ರಪತಿ ಹುದ್ದೆಯು ದೇಶದಲ್ಲಿ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಎನಿಸಿಕೊಂಡಿದೆ. ಒಂದು ವೇಳೆ ರಾಷ್ಟ್ರಪತಿಯ ಸ್ಥಾನ ತೆರವಾದರೆ ಹೊಸಬರ ಆಯ್ಕೆ ಆಗುವವರೆಗೆ ತಾತ್ಕಾಲಿಕವಾಗಿ ಆ ಸ್ಥಾನವನ್ನು ಉಪ ರಾಷ್ಟ್ರಪತಿಗಳು ನಿಭಾಯಿಸುತ್ತಾರೆ.</p>.<p>ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.</p>.<p>ಐದು ವರ್ಷಗಳ ಅವಧಿಗೆ ಉಪ ರಾಷ್ಟ್ರಪತಿ ಸೇವೆ ಸಲ್ಲಿಸುತ್ತಾರಾದರೂ, ಅದರ ನಂತರದ ಆಯ್ಕೆ ವಿಳಂಬವಾದರೆ ಅಲ್ಲಿಯ ವರೆಗೆ ಮುಂದುವರಿಯಲು ಅವಕಾಶವಿದೆ.</p>.<p>ಧನಕರ್ ಅವರು ಹುಟ್ಟಿದ್ದು 1951ರಲ್ಲಿ. ಜೈಪುರದ ಮಹಾರಾಜ ಕಾಲೇಜಿನಿಂದ ಭೌತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಜೈಪುರ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಅವರ ಪತ್ನಿಯ ಹೆಸರು ಸುದೇಶ್ ಧನಕರ್ ಮತ್ತು ಅವರಿಗೆ ಒಬ್ಬಳು ಮಗಳಿದ್ದಾರೆ.</p>.<p>ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್ ಅವರು 1989ರಲ್ಲಿ ರಾಜಕೀಯಕ್ಕೆ ಬಂದರು. ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1990ರಲ್ಲಿ ಕೇಂದ್ರ ಸಚಿವರೂ ಆದರು. ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.</p>.<p>1993ರಿಂದ 1998ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ಜನತಾ ದಳದಿಂದ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ಕಾಂಗ್ರೆಸ್ ಸೇರಿದ್ದರು. 2003ರಲ್ಲಿ ಅವರು ಬಿಜೆಪಿ ಸೇರಿದರು.</p>.<p>2019ರಲ್ಲಿ ಪಶ್ಚಿಮ ಬಂಗಾಳದರಾಜ್ಯಪಾಲರಾಗಿ ಅವರನ್ನು ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗಿನ ತಿಕ್ಕಾಟದಿಂದಲೇ ಆಗಾಗ ಸುದ್ದಿಯಾಗುತ್ತಿದ್ದರು.</p>.<p>ಉಪ ರಾಷ್ಟ್ರಪತಿ ಹುದ್ದೆಗೆಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಚುನಾವಣೆಯಲ್ಲಿ ಮಣಿಸಿದ್ದರು.</p>.<p><strong>ಇವುಗಳನ್ನೂ ಓದಿ...</strong></p>.<p><a href="https://www.prajavani.net/india-news/pm-modi-congratulates-dhankharsays-proud-moment-for-india-to-have-kisan-putra-vp-961087.html" itemprop="url">ರೈತನ ಮಗ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶಕ್ಕೆ ಹೆಮ್ಮೆಯ ಕ್ಷಣ: ಪ್ರಧಾನಿ </a></p>.<p><a href="https://www.prajavani.net/india-news/vice-president-election-who-is-the-jagdeep-dhankhar-955219.html" itemprop="url">ಉಪರಾಷ್ಟ್ರಪತಿ ಚುನಾವಣೆ:NDA ಅಭ್ಯರ್ಥಿ ಜಗದೀಪ್ ಧನಕರ್ ಬಗ್ಗೆ ನಿಮಗೆಷ್ಟು ಗೊತ್ತು? </a></p>.<p><a href="https://www.prajavani.net/india-news/dhankhars-knowledge-of-ground-problems-constitution-to-be-beneficial-to-country-amit-shah-955215.html" itemprop="url">ಧನಕರ್ ಅವರ ಸಾಂವಿಧಾನಿಕ ಜ್ಞಾನದಿಂದ ದೇಶಕ್ಕೆ ಪ್ರಯೋಜನ: ಅಮಿತ್ ಶಾ </a></p>.<p><a href="https://www.prajavani.net/op-ed/analysis/west-bengal-governor-jagdeep-dhankhar-cm-mamata-banerjee-tmc-politics-democracy-943955.html" itemprop="url">ವಿಶ್ಲೇಷಣೆ | ರಾಜ್ಯಪಾಲ: ಕೇಂದ್ರವೇ ನೇಮಿಸಬೇಕೆ? </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>