<p><strong>ರಾಂಚಿ: </strong>ಜಾರ್ಖಂಡ್ ರಾಜ್ಯವು 2026–27ರೊಳಗೆ ಸೌರ ಶಕ್ತಿಯಿಂದ ಒಟ್ಟು 4 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ. ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಮಂಗಳವಾರ ಬಿಡುಗಡೆ ಮಾಡಿರುವ ಸೌರಶಕ್ತಿ ನೀತಿ – 2022ರಲ್ಲಿ ಈ ಮಾಹಿತಿ ಇದೆ.</p>.<p>ಹೊಸ ನೀತಿಯ ಮೂಲಕ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶವನ್ನೂ ರಾಜ್ಯವು ಹೊಂದಿದ್ದು, ಅವರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ಸೊರೇನ್ ಹೇಳಿದ್ದಾರೆ. ಏಕಗವಾಕ್ಷಿ ವ್ಯವಸ್ಥೆ ಸೇರಿದಂತೆ ಇತರ ಹಲವು ಸೌಲಭ್ಯಗಳು ಹೂಡಿಕೆದಾರರಿಗೆ ಸಿಗಲಿವೆ.</p>.<p>ಜಮೀನು ಬ್ಯಾಂಕ್ ಮೂಲಕ ಅವರಿಗೆ ಜಮೀನಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. 25 ಮೆಗಾ ವಾಟ್ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳಿಗೆ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಅನುಮೋದನೆ ನೀಡುತ್ತದೆ ಎಂದು ನೀತಿಯಲ್ಲಿ ಹೇಳಲಾಗಿದೆ.</p>.<p>ಮನೆಯ ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ನಗರವಾಸಿಗಳಿಗೆ, ಅವರ ವಾರ್ಷಿಕ ಆದಾಯವು ₹ 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಸೌರಫಲಕ ಅಳವಡಿಕೆ ವೆಚ್ಚದ ಗರಿಷ್ಠ ಶೇಕಡ 80ರಷ್ಟನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಎಂದು ಸೊರೇನ್ ಹೇಳಿದ್ದಾರೆ. ರಾಜ್ಯವು ಒಟ್ಟು ಒಂದು ಸಾವಿರ ಹಳ್ಳಿಗಳನ್ನು ಮಾದರಿ ಸೌರವಿದ್ಯುತ್ ಹಳ್ಳಿಗಳನ್ನಾಗಿ ಪರಿವರ್ತಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ: </strong>ಜಾರ್ಖಂಡ್ ರಾಜ್ಯವು 2026–27ರೊಳಗೆ ಸೌರ ಶಕ್ತಿಯಿಂದ ಒಟ್ಟು 4 ಸಾವಿರ ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ. ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಮಂಗಳವಾರ ಬಿಡುಗಡೆ ಮಾಡಿರುವ ಸೌರಶಕ್ತಿ ನೀತಿ – 2022ರಲ್ಲಿ ಈ ಮಾಹಿತಿ ಇದೆ.</p>.<p>ಹೊಸ ನೀತಿಯ ಮೂಲಕ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶವನ್ನೂ ರಾಜ್ಯವು ಹೊಂದಿದ್ದು, ಅವರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ಸೊರೇನ್ ಹೇಳಿದ್ದಾರೆ. ಏಕಗವಾಕ್ಷಿ ವ್ಯವಸ್ಥೆ ಸೇರಿದಂತೆ ಇತರ ಹಲವು ಸೌಲಭ್ಯಗಳು ಹೂಡಿಕೆದಾರರಿಗೆ ಸಿಗಲಿವೆ.</p>.<p>ಜಮೀನು ಬ್ಯಾಂಕ್ ಮೂಲಕ ಅವರಿಗೆ ಜಮೀನಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. 25 ಮೆಗಾ ವಾಟ್ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳಿಗೆ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಅನುಮೋದನೆ ನೀಡುತ್ತದೆ ಎಂದು ನೀತಿಯಲ್ಲಿ ಹೇಳಲಾಗಿದೆ.</p>.<p>ಮನೆಯ ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ನಗರವಾಸಿಗಳಿಗೆ, ಅವರ ವಾರ್ಷಿಕ ಆದಾಯವು ₹ 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಸೌರಫಲಕ ಅಳವಡಿಕೆ ವೆಚ್ಚದ ಗರಿಷ್ಠ ಶೇಕಡ 80ರಷ್ಟನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಎಂದು ಸೊರೇನ್ ಹೇಳಿದ್ದಾರೆ. ರಾಜ್ಯವು ಒಟ್ಟು ಒಂದು ಸಾವಿರ ಹಳ್ಳಿಗಳನ್ನು ಮಾದರಿ ಸೌರವಿದ್ಯುತ್ ಹಳ್ಳಿಗಳನ್ನಾಗಿ ಪರಿವರ್ತಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>