ಶ್ರೀನಗರ: ‘ಕಾಶ್ಮೀರದಲ್ಲಿ ನಮಗೆ ಯಾವುದೇ ತೊಂದರೆ ಇರಲಿಲ್ಲ. 10 ವರ್ಷಗಳಿಂದ ಇಲ್ಲೇ ನೆಲೆಸಿದ್ದೇನೆ. ಸ್ಥಳೀಯರು ನಮಗೆ ಎಲ್ಲಾ ರೀತಿಯ ಸಹಕಾರ, ಸಹಾಯ ನೀಡುತ್ತಿದ್ದರು.ಈ ಹಿಂದೆ ಇರದಿದ್ದ ಸಮಸ್ಯೆ ಎರಡೂವರೆ ವರ್ಷಗಳಿಂದ ಆರಂಭವಾಗಿದೆ’ ಎಂದು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಅಂಕಜ್ ಟಿಕ್ಕೋ ಆರೋಪಿಸಿದ್ದಾರೆ.