‘ಗೋಧಿ, ಭತ್ತ, ಹತ್ತಿ, ಕಡಳೆಕಾಳು ಮತ್ತು ಕಡಳೆಬೀಜಗಳನ್ನು ಮೊದಲಿಗೆ ಎಂಎಸ್ಪಿ ವ್ಯಾಪ್ತಿಗೆ ತರಲಾಗುವುದು. ಬಳಿಕ, ಹಂತ ಹಂತವಾಗಿ ಮತ್ತಷ್ಟು ಕೃಷಿ ಉತ್ಪನ್ನಗಳನ್ನು ಸೇರಿಸಲಾಗುವುದು. ಗುಜರಾತ್ನಲ್ಲಿ ರೈತರ ಕೃಷಿ ಚಟುವಟಿಕೆಗೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹಗಲಿನಲ್ಲೂ ಕೃಷಿಗೆ 12 ಗಂಟೆ ವಿದ್ಯುತ್ ಒದಗಿಸಲಾಗುವುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.