ಮಾನವ ಪಿರಮಿಡ್ಗಳ ಮೂಲಕ ಎತ್ತರದಲ್ಲಿರುವ ಮೊಸರು ಅಥವಾ ಬೆಣ್ಣೆಯನ್ನು ಒಳಗೊಂಡ ಮಡಕೆಯನ್ನು ತಲುಪಿ ಅದನ್ನು ಒಡೆಯುವ ಉತ್ಸವವೇ ದಹಿ ಹಂಡಿ. ಪಿರಮಿಡ್ ರಚಿಸುವವರನ್ನು ‘ಗೋವಿಂದಾ ತಂಡ’ವೆಂದು ಕರೆಯಲಾಗುತ್ತದೆ. ಈ ವೇಳೆ ‘ಗೋವಿಂದ’ ವೇಷಧಾರಿಗಳು ಬಿದ್ದು ಗಾಯಗೊಳ್ಳುವುದು ಸಾಮಾನ್ಯ. ಗಾಯಗೊಂಡ 19 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೃಹನ್ ಮುಂಬೈ ಪಾಲಿಕೆ ತಿಳಿಸಿದೆ.