2022ರ ಮಾರ್ಚ್ 23ರ ತೀರ್ಪಿನಲ್ಲಿ ಇದೇ ಪೀಠವು ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಹೈಕೋರ್ಟ್ಗಳ ನಿರ್ಧಾರಗಳ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತ್ತು. ಈಶಾನ್ಯ ರಾಜ್ಯಗಳು ನಡೆಸುವ ಲಾಟರಿಗಳ ಮೇಲೆ ತೆರಿಗೆ ವಿಧಿಸುವ ಶಾಸನಬದ್ಧ ಹಕ್ಕು ಹೊಂದಿಲ್ಲ ಎಂದು ಈ ಕೋರ್ಟ್ಗಳು ಹೇಳಿದ್ದವು ಹಾಗೂ ಹಣ ಮರುಪಾವತಿಗೆ ಆದೇಶಿಸಿದ್ದವು. ಇದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದರ ಮೇರೆಗೆ ಮೇಘಾಲಯ ಸರ್ಕಾರ ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು.