<p><strong>ಜಮ್ಮು</strong>: ‘ಲಷ್ಕರ್ ಎ–ತಯಬಾದ (ಎಲ್ಇಟಿ) ಮಾರ್ಗದರ್ಶಕ ಹಾಗೂ ಪಾಕಿಸ್ತಾನದ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಉಗ್ರನನ್ನು ಭಾರತೀಯ ಸೇನೆಯು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾನುವಾರ ಬಂಧಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಬ್ಜ್ಕೋಟ್ ಗ್ರಾಮದ ನಿವಾಸಿ ತಬರಕ್ ಹುಸೇನ್ (32) ಬಂಧಿತ. ಈತ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ. ಆರು ವರ್ಷಗಳಲ್ಲಿ ಎರಡನೇ ಬಾರಿ ಈತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>ಸೈನಿಕರು ಬಂಧಿಸಲು ಮುಂದಾ<br />ದಾಗ, ‘ಸಾಯುವುದಕ್ಕಾಗಿ ಬಂದಿದ್ದೆ. ನನಗೆ ಮೋಸ ಮಾಡಿಬಿಟ್ಟರು. ಸಹೋದರರೆ, ಭಾರತೀಯ ಸೈನಿಕರಿಂದ ನನ್ನನ್ನು ಪಾರು ಮಾಡಿ ಎಂದು ಆತ ಕೂಗಿಕೊಳ್ಳುತ್ತಿದ್ದ’ ಎಂದಿದ್ದಾರೆ.</p>.<p>‘ಸೆಹರ್ ಮಕ್ರಿ ಪ್ರದೇಶದ ಬಳಿ ಗಸ್ತಿನಲ್ಲಿದ್ದ ಸೈನಿಕರನ್ನು ಕಂಡೊಡನೆಯೇ ಆತ ಓಡಿ ಹೋಗಲು ಯತ್ನಿಸಿದ್ದ. ಆಗ ಆತನತ್ತ ಗುಂಡು ಹಾರಿಸಿ, ಬಳಿಕ ಬಂಧಿಸಲಾಗಿದೆ’ ಎಂದು ರಜೌರಿ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಅಸ್ಲಾಂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು</strong>: ‘ಲಷ್ಕರ್ ಎ–ತಯಬಾದ (ಎಲ್ಇಟಿ) ಮಾರ್ಗದರ್ಶಕ ಹಾಗೂ ಪಾಕಿಸ್ತಾನದ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಉಗ್ರನನ್ನು ಭಾರತೀಯ ಸೇನೆಯು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾನುವಾರ ಬಂಧಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಬ್ಜ್ಕೋಟ್ ಗ್ರಾಮದ ನಿವಾಸಿ ತಬರಕ್ ಹುಸೇನ್ (32) ಬಂಧಿತ. ಈತ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ. ಆರು ವರ್ಷಗಳಲ್ಲಿ ಎರಡನೇ ಬಾರಿ ಈತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>ಸೈನಿಕರು ಬಂಧಿಸಲು ಮುಂದಾ<br />ದಾಗ, ‘ಸಾಯುವುದಕ್ಕಾಗಿ ಬಂದಿದ್ದೆ. ನನಗೆ ಮೋಸ ಮಾಡಿಬಿಟ್ಟರು. ಸಹೋದರರೆ, ಭಾರತೀಯ ಸೈನಿಕರಿಂದ ನನ್ನನ್ನು ಪಾರು ಮಾಡಿ ಎಂದು ಆತ ಕೂಗಿಕೊಳ್ಳುತ್ತಿದ್ದ’ ಎಂದಿದ್ದಾರೆ.</p>.<p>‘ಸೆಹರ್ ಮಕ್ರಿ ಪ್ರದೇಶದ ಬಳಿ ಗಸ್ತಿನಲ್ಲಿದ್ದ ಸೈನಿಕರನ್ನು ಕಂಡೊಡನೆಯೇ ಆತ ಓಡಿ ಹೋಗಲು ಯತ್ನಿಸಿದ್ದ. ಆಗ ಆತನತ್ತ ಗುಂಡು ಹಾರಿಸಿ, ಬಳಿಕ ಬಂಧಿಸಲಾಗಿದೆ’ ಎಂದು ರಜೌರಿ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಅಸ್ಲಾಂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>