‘ಪತಿ ಮೃತಪಟ್ಟಾಗ ಬಲವಂತವಾಗಿ ಪತ್ನಿಯ ಬಳೆ ಒಡೆಯುವ, ಹಣೆಯ ಕುಂಕುಮ ಅಳಿಸುವ, ಮಾಂಗಲ್ಯ ತೆಗೆಯುವ ಅನಿಷ್ಟ ಪದ್ಧತಿಯನ್ನು ತೊಲಗಿಸುವ ಬಗ್ಗೆ 34 ಗ್ರಾಮ ಪಂಚಾಯಿತಿಗಳ ಮನವೊಲಿಸಿದ್ದೇನೆ. ಈ ಬಗ್ಗೆ ಸರ್ಪಂಚ್, ಉಪ ಸರ್ಪಂಚ್ ಮತ್ತು ಗ್ರಾಮ ಸೇವಕರೊಂದಿಗೆ ಸಭೆ ನಡೆಸಿದ್ದೇನೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.