ಏಪ್ರಿಲ್ 2ರ ಸಂಜೆ ಉತ್ತರ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಬೆಂಕಿಯ ಉಂಡೆಯೊಂದು ಆಗಸದಲ್ಲಿ ಹಾದು ಹೋಗಿದ್ದನ್ನು ಅನೇಕರು ಕಂಡಿದ್ದರು. ಹೀಗಿರುವಾಗಲೇ, ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನಲ್ಲಿ ಲೋಹದ ವೃತ್ತಾಕಾರದ ವಸ್ತು ಮತ್ತು ಆರು ಸಿಲಿಂಡರ್ ರೀತಿಯ ವಸ್ತುಗಳು ಪತ್ತೆಯಾಗಿವೆ.