<p><strong>ನಾಗಪುರ:</strong> ಇಲ್ಲಿ ನಡೆದ ಅನಾಥ ಹಾಗೂ ವಾಕ್, ಶ್ರವಣ ದೋಷವಿರುವ ಯುವಕ– ಯುವತಿಯ ವಿವಾಹ ನಿಶ್ಚಿತಾರ್ಥದಲ್ಲಿ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್ ದಂಪತಿ ವಧುವಿನ ತಂದೆ–ತಾಯಿಯಾಗಿ ಹಾಗೂ ನಾಗಪುರದ ಜಿಲ್ಲಾಧಿಕಾರಿ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ ವರನ ತಂದೆ–ತಾಯಿಯಾಗಿ ಪಾಲ್ಗೊಂಡರು.</p>.<p>23 ವರ್ಷಗಳ ಹಿಂದೆ ನಾಗಪುರ ರೈಲ್ವೆ ನಿಲ್ದಾಣದಲ್ಲಿ ಅನಾಥವಾಗಿದ್ದ ಹೆಣ್ಣು ಮಗುವನ್ನು ರಕ್ಷಿಸಿದ ಸಮಾಜ ಸೇವಕ ಶಂಕರಬಾಬಾ ಪಾಪಲ್ಕರ್ ಅವರು, ಅಮರಾವತಿ ಜಿಲ್ಲೆಯ ಅನಾಥಾಶ್ರಮದಲ್ಲಿ ಬೆಳೆಸಿದರು. ಆ ಹೆಣ್ಣು ಮಗುವೇ ಈ ವಿವಾಹ ಮಹೋತ್ಸವದ ವಧು.</p>.<p>ಇದೇ ರೀತಿ ಇಪ್ಪತ್ತೈದು ವರ್ಷಗಳ ಹಿಂದೆ ಠಾಣೆ ಜಿಲ್ಲೆಯ ದೊಂಬಿವಿಲಿ ಪಟ್ಟಣದಲ್ಲಿ ಸಿಕ್ಕಿದ ಎರಡು ವರ್ಷದ ಬಾಲಕನನ್ನು ರಕ್ಷಿಸಿದ ಪಾಪಲ್ಕರ್,ಇದೇ ಅನಾಥಶ್ರಮದಲ್ಲಿ ಬೆಳೆಸಿದರು. ಆ ಬಾಲಕನೇ ಈಗ ಮದುವೆಯಾದ 27 ವರ್ಷದ ವರ. ಇವರಿಬ್ಬರ ವಿವಾಹ ಮಹೋತ್ಸವ ಇದೇ 20ರಂದು ನಾಗಪುರದಲ್ಲಿ ನಡೆಯಲಿದೆ.</p>.<p>ವಿವಾಹ ಮಹೋತ್ಸವಕ್ಕೆ ಮುನ್ನ ಸಚಿವ ದೇಶಮುಖ್ ಅವರ ಅಳಿಯ, ಜಿಲ್ಲಾಧಿಕಾರಿ ಠಾಕ್ರೆ ಮತ್ತು ವಧು–ವರರನ್ನು ನಗರದಲ್ಲಿರುವ ತಮ್ಮ ಮನೆಗೆ ಆತಿಥ್ಯಕ್ಕಾಗಿ ಆಹ್ವಾನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ಇಲ್ಲಿ ನಡೆದ ಅನಾಥ ಹಾಗೂ ವಾಕ್, ಶ್ರವಣ ದೋಷವಿರುವ ಯುವಕ– ಯುವತಿಯ ವಿವಾಹ ನಿಶ್ಚಿತಾರ್ಥದಲ್ಲಿ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್ ದಂಪತಿ ವಧುವಿನ ತಂದೆ–ತಾಯಿಯಾಗಿ ಹಾಗೂ ನಾಗಪುರದ ಜಿಲ್ಲಾಧಿಕಾರಿ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ ವರನ ತಂದೆ–ತಾಯಿಯಾಗಿ ಪಾಲ್ಗೊಂಡರು.</p>.<p>23 ವರ್ಷಗಳ ಹಿಂದೆ ನಾಗಪುರ ರೈಲ್ವೆ ನಿಲ್ದಾಣದಲ್ಲಿ ಅನಾಥವಾಗಿದ್ದ ಹೆಣ್ಣು ಮಗುವನ್ನು ರಕ್ಷಿಸಿದ ಸಮಾಜ ಸೇವಕ ಶಂಕರಬಾಬಾ ಪಾಪಲ್ಕರ್ ಅವರು, ಅಮರಾವತಿ ಜಿಲ್ಲೆಯ ಅನಾಥಾಶ್ರಮದಲ್ಲಿ ಬೆಳೆಸಿದರು. ಆ ಹೆಣ್ಣು ಮಗುವೇ ಈ ವಿವಾಹ ಮಹೋತ್ಸವದ ವಧು.</p>.<p>ಇದೇ ರೀತಿ ಇಪ್ಪತ್ತೈದು ವರ್ಷಗಳ ಹಿಂದೆ ಠಾಣೆ ಜಿಲ್ಲೆಯ ದೊಂಬಿವಿಲಿ ಪಟ್ಟಣದಲ್ಲಿ ಸಿಕ್ಕಿದ ಎರಡು ವರ್ಷದ ಬಾಲಕನನ್ನು ರಕ್ಷಿಸಿದ ಪಾಪಲ್ಕರ್,ಇದೇ ಅನಾಥಶ್ರಮದಲ್ಲಿ ಬೆಳೆಸಿದರು. ಆ ಬಾಲಕನೇ ಈಗ ಮದುವೆಯಾದ 27 ವರ್ಷದ ವರ. ಇವರಿಬ್ಬರ ವಿವಾಹ ಮಹೋತ್ಸವ ಇದೇ 20ರಂದು ನಾಗಪುರದಲ್ಲಿ ನಡೆಯಲಿದೆ.</p>.<p>ವಿವಾಹ ಮಹೋತ್ಸವಕ್ಕೆ ಮುನ್ನ ಸಚಿವ ದೇಶಮುಖ್ ಅವರ ಅಳಿಯ, ಜಿಲ್ಲಾಧಿಕಾರಿ ಠಾಕ್ರೆ ಮತ್ತು ವಧು–ವರರನ್ನು ನಗರದಲ್ಲಿರುವ ತಮ್ಮ ಮನೆಗೆ ಆತಿಥ್ಯಕ್ಕಾಗಿ ಆಹ್ವಾನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>