<p><strong>ಪಾಲ್ಘರ್:</strong> ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿತಕ್ಕೆ ತುತ್ತಾಗಿ ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಮೂವರು ಅಪ್ರಾಪ್ತರು ಗಾಯಗೊಂಡಿದ್ದಾರೆ.</p>.<p>ಸೋಮವಾರ ಸಂಜೆ ಪಾಲ್ಘರ್ನ ದಹನು ತಾಲೂಕಿನ ಮಂಕಾರ್ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ದುರಂತ ನಡೆದಿದೆ ಎಂದು ತಹಸೀಲ್ದಾರ್ ರಾಹುಲ್ ಸಾರಾಂಗ್ ತಿಳಿಸಿದ್ದಾರೆ.</p>.<p>ಸೋಮವಾರ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಗುಡುಗು, ಮಳೆ ಜೋರಿದ್ದ ಸಂದರ್ಭ ಮಕ್ಕಳು ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ್ದಾರೆ. ಸಿಡಿಲು ಮರದ ಮೇಲೆ ಅಪ್ಪಳಿಸಿದ ಪರಿಣಾಮ ಓರ್ವ ಅಪ್ರಾಪ್ತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ರವೀಂದ್ರ ಕೋರ್ಡ ಎಂದು ಗುರುತಿಸಲಾಗಿದೆ.</p>.<p>ಗಾಯಗೊಂಡ ಇತರ ಮೂವರು 14-16 ವಯಸ್ಸಿನವರಾಗಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><a href="https://www.prajavani.net/india-news/thane-woman-gets-covid-vaccine-three-shots-back-to-back-in-a-single-day-843385.html" itemprop="url">ಕೋವಿಡ್ ಲಸಿಕೆ ಅವಾಂತರ: ಒಂದೇ ದಿನ ಮಹಿಳೆಗೆ ಒಂದರ ಹಿಂದೆ ಒಂದರಂತೆ 3 ಡೋಸ್! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲ್ಘರ್:</strong> ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ 15 ವರ್ಷದ ಹುಡುಗನೊಬ್ಬ ಸಿಡಿಲಿನ ಬಡಿತಕ್ಕೆ ತುತ್ತಾಗಿ ಮೃತ ಪಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿದೆ. ದುರ್ಘಟನಯಲ್ಲಿ ಮೂವರು ಅಪ್ರಾಪ್ತರು ಗಾಯಗೊಂಡಿದ್ದಾರೆ.</p>.<p>ಸೋಮವಾರ ಸಂಜೆ ಪಾಲ್ಘರ್ನ ದಹನು ತಾಲೂಕಿನ ಮಂಕಾರ್ಪದ ಎಂಬಲ್ಲಿ ನಾಲ್ವರು ಹುಡುಗರು ದನ ಮೇಯಿಸಲು ಬಯಲಿಗೆ ತೆರಳಿದ್ದಾಗ ದುರಂತ ನಡೆದಿದೆ ಎಂದು ತಹಸೀಲ್ದಾರ್ ರಾಹುಲ್ ಸಾರಾಂಗ್ ತಿಳಿಸಿದ್ದಾರೆ.</p>.<p>ಸೋಮವಾರ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಗುಡುಗು, ಮಳೆ ಜೋರಿದ್ದ ಸಂದರ್ಭ ಮಕ್ಕಳು ಮೊಬೈಲ್ ನೆಟ್ವರ್ಕ್ಗಾಗಿ ಮರ ಹತ್ತಿದ್ದಾರೆ. ಸಿಡಿಲು ಮರದ ಮೇಲೆ ಅಪ್ಪಳಿಸಿದ ಪರಿಣಾಮ ಓರ್ವ ಅಪ್ರಾಪ್ತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ರವೀಂದ್ರ ಕೋರ್ಡ ಎಂದು ಗುರುತಿಸಲಾಗಿದೆ.</p>.<p>ಗಾಯಗೊಂಡ ಇತರ ಮೂವರು 14-16 ವಯಸ್ಸಿನವರಾಗಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><a href="https://www.prajavani.net/india-news/thane-woman-gets-covid-vaccine-three-shots-back-to-back-in-a-single-day-843385.html" itemprop="url">ಕೋವಿಡ್ ಲಸಿಕೆ ಅವಾಂತರ: ಒಂದೇ ದಿನ ಮಹಿಳೆಗೆ ಒಂದರ ಹಿಂದೆ ಒಂದರಂತೆ 3 ಡೋಸ್! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>