‘ಖಾಸಗಿ ಸಂಸ್ಥೆಯ ನೈರ್ಮಲ್ಯ ಕಾರ್ಮಿಕನೊಬ್ಬ ಶೌಚಾಲಯದ ಪೈಪ್ಲೈನ್ ಅನ್ನು ಕುಡಿಯುವ ನೀರಿನ ಟ್ಯಾಂಕಿನೊಂದಿಗೆ ಜೋಡಿಸಿದ್ದ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಟ್ಯಾಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಈ ನೀರನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಇದಕ್ಕೆ ಕಾರಣರಾದ ಸ್ಟೇಷನ್ ಮಾಸ್ಟರ್ ಚೌಥ್ಮಲ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ. ನೈರ್ಮಲ್ಯ ಕಾರ್ಮಿಕನನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ’ ಎಂದು ಪಾಲ್ ವಿವರಿಸಿದ್ದಾರೆ.