ಇಲ್ಲಿನ ನೆನ್ಮೆನಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ನರೇಗಾ ಕಾರ್ಮಿಕರನ್ನು ‘ದೇಶದ ನಿರ್ಮಾತೃ ಗಳು’ ಎಂದು ಉಲ್ಲೇಖಿಸಿದ ರಾಹುಲ್, ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ದಿನಗಳನ್ನು 200ಕ್ಕೆ ಏರಿಸಬೇಕು ಹಾಗೂ ಈ ಕಾರ್ಮಿಕರ ಕೂಲಿಯನ್ನು ದಿನಕ್ಕೆ ₹ 400ಕ್ಕೆ ಏರಿಸಬೇಕು. ಅಲ್ಲದೆ ಈ ಯೋಜನೆಯನ್ನು ಭತ್ತ ಕೃಷಿ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.