<p><strong>ಕಾನ್ಪುರ/ಮಥುರಾ (ಪಿಟಿಐ): </strong>ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ‘ಮಿಷನ್ 2022’ ಗುರಿ ಸಾಧನೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಲ್ಲಿ ‘ರಥಯಾತ್ರೆ’ ಆರಂಭಿಸಿದರು.</p>.<p class="bodytext">ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಈಗಾಗಲೇ ‘ರೈತರನ್ನು ಹತ್ತಿಕ್ಕಿದೆ’. ಮರಳಿ ಅಧಿಕಾರಕ್ಕೆ ಬಂದರೆ ‘ಸಂವಿಧಾನವನ್ನೂ ಹತ್ತಿಕ್ಕಲಿದೆ’ ಎಂದು ಹೇಳಿದರು.</p>.<p class="bodytext">ಉತ್ತರ ಪ್ರದೇಶದ ಕಾನ್ಪುರದಿಂದ ಅಖಿಲೇಶ್ ಯಾದವ್ ಆರಂಭಿಸಿದ ‘ಸಮಾಜವಾದಿ ವಿಜಯ್ ರಥಯಾತ್ರೆ’ಯು 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಚುನಾವಣೆಯ ಪೂರ್ವದಲ್ಲಿ ಸಂಚರಿಸಲಿದೆ.</p>.<p>ಯಾತ್ರೆಗೆ ಚಾಲನೆ ನೀಡುವ ಮುನ್ನ ಅಖಿಲೇಶ್ ತಮ್ಮ ತಂದೆ ಮುಲಾಯಂ ಸಿಂಗ್ ಆಶೀರ್ವಾದ ಪಡೆದರು. ನೋಟು ರದ್ದತಿ ಸಂದರ್ಭದಲ್ಲಿ ಬ್ಯಾಂಕ್ನ ಹೊರಗೆ ತಾಯಿ ಸಾಲಿನಲ್ಲಿ ನಿಂತಿದ್ದಾಗ ಜನಿಸಿದ್ದ ಬಾಲಕಿ ‘ಖಜಾಂಚಿ’ಯು ಯಾತ್ರೆಗೆ ಚಾಲನೆ ನೀಡಿದಳು. ಮರ್ಸಿಡಿಸ್ ಬಸ್ಗೆ ರಥದ ಸ್ವರೂಪವನ್ನು ನೀಡಲಾಗಿದೆ.</p>.<p>ಮುಲಾಯಂ ಸಿಂಗ್ ಅವರ ಚಿತ್ರದ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್, ಆಚಾರ್ಯ ನರೇಂದ್ರ ದೇವಾ, ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಪಕ್ಷದ ಹಿರಿಯ ನಾಯಕರಾದ ಜನೇಶ್ವರ ಮಿಶ್ರಾ, ಬಂಧನದಲ್ಲಿರುವ ಸಂಸದ ಅಜಂ ಖಾನ್ ಚಿತ್ರ ಹೊಂದಿದೆ.</p>.<p>ಯಾತ್ರೆಯು ಕಾನ್ಪುರ, ಕಾನ್ಪರ ದೆಹತ್, ಹಮಿರ್ಪುರ, ಜಲೌನ್ಗೆ ಮೊದಲ ಹಂತದಲ್ಲಿ ತೆರಳಲಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಹತ್ತಿಕ್ಕುವ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.</p>.<p>ಜನತೆ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಿದ್ದು, ಪೂರ್ಣ ಬಹುಮತದಿಂದ ಪಕ್ಷ ಸರ್ಕಾರ ರಚಿಸುವ ವಿಶ್ವಾಸವಿದೆ. ತಂದೆ ಮುಲಾಯಂ ಸಿಂಗ್ ಅವರೂ ಕಾನ್ಪುರದಿಂದ ರಥಯಾತ್ರೆ ಆರಂಭಿಸಿದ್ದರು. ತಾವು ಆ ಸಂಪ್ರದಾಯ ಮುಂದುವರಿಸುತ್ತಿರುವುದಾಗಿ ಹೇಳಿದರು.</p>.<p class="bodytext">ಇನ್ನೊಂದೆಡೆ, ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ, ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಅವರು, ಮಥುರಾದಿಂದ ಸಾಮಾಜಿಕ ಪರಿವರ್ತನಾ ಯಾತ್ರೆಯನ್ನು ಸೋಮವಾರ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ/ಮಥುರಾ (ಪಿಟಿಐ): </strong>ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ‘ಮಿಷನ್ 2022’ ಗುರಿ ಸಾಧನೆಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಲ್ಲಿ ‘ರಥಯಾತ್ರೆ’ ಆರಂಭಿಸಿದರು.</p>.<p class="bodytext">ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಈಗಾಗಲೇ ‘ರೈತರನ್ನು ಹತ್ತಿಕ್ಕಿದೆ’. ಮರಳಿ ಅಧಿಕಾರಕ್ಕೆ ಬಂದರೆ ‘ಸಂವಿಧಾನವನ್ನೂ ಹತ್ತಿಕ್ಕಲಿದೆ’ ಎಂದು ಹೇಳಿದರು.</p>.<p class="bodytext">ಉತ್ತರ ಪ್ರದೇಶದ ಕಾನ್ಪುರದಿಂದ ಅಖಿಲೇಶ್ ಯಾದವ್ ಆರಂಭಿಸಿದ ‘ಸಮಾಜವಾದಿ ವಿಜಯ್ ರಥಯಾತ್ರೆ’ಯು 403 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಚುನಾವಣೆಯ ಪೂರ್ವದಲ್ಲಿ ಸಂಚರಿಸಲಿದೆ.</p>.<p>ಯಾತ್ರೆಗೆ ಚಾಲನೆ ನೀಡುವ ಮುನ್ನ ಅಖಿಲೇಶ್ ತಮ್ಮ ತಂದೆ ಮುಲಾಯಂ ಸಿಂಗ್ ಆಶೀರ್ವಾದ ಪಡೆದರು. ನೋಟು ರದ್ದತಿ ಸಂದರ್ಭದಲ್ಲಿ ಬ್ಯಾಂಕ್ನ ಹೊರಗೆ ತಾಯಿ ಸಾಲಿನಲ್ಲಿ ನಿಂತಿದ್ದಾಗ ಜನಿಸಿದ್ದ ಬಾಲಕಿ ‘ಖಜಾಂಚಿ’ಯು ಯಾತ್ರೆಗೆ ಚಾಲನೆ ನೀಡಿದಳು. ಮರ್ಸಿಡಿಸ್ ಬಸ್ಗೆ ರಥದ ಸ್ವರೂಪವನ್ನು ನೀಡಲಾಗಿದೆ.</p>.<p>ಮುಲಾಯಂ ಸಿಂಗ್ ಅವರ ಚಿತ್ರದ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್, ಆಚಾರ್ಯ ನರೇಂದ್ರ ದೇವಾ, ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಪಕ್ಷದ ಹಿರಿಯ ನಾಯಕರಾದ ಜನೇಶ್ವರ ಮಿಶ್ರಾ, ಬಂಧನದಲ್ಲಿರುವ ಸಂಸದ ಅಜಂ ಖಾನ್ ಚಿತ್ರ ಹೊಂದಿದೆ.</p>.<p>ಯಾತ್ರೆಯು ಕಾನ್ಪುರ, ಕಾನ್ಪರ ದೆಹತ್, ಹಮಿರ್ಪುರ, ಜಲೌನ್ಗೆ ಮೊದಲ ಹಂತದಲ್ಲಿ ತೆರಳಲಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಹತ್ತಿಕ್ಕುವ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.</p>.<p>ಜನತೆ ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡಲಿದ್ದು, ಪೂರ್ಣ ಬಹುಮತದಿಂದ ಪಕ್ಷ ಸರ್ಕಾರ ರಚಿಸುವ ವಿಶ್ವಾಸವಿದೆ. ತಂದೆ ಮುಲಾಯಂ ಸಿಂಗ್ ಅವರೂ ಕಾನ್ಪುರದಿಂದ ರಥಯಾತ್ರೆ ಆರಂಭಿಸಿದ್ದರು. ತಾವು ಆ ಸಂಪ್ರದಾಯ ಮುಂದುವರಿಸುತ್ತಿರುವುದಾಗಿ ಹೇಳಿದರು.</p>.<p class="bodytext">ಇನ್ನೊಂದೆಡೆ, ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ, ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಅವರು, ಮಥುರಾದಿಂದ ಸಾಮಾಜಿಕ ಪರಿವರ್ತನಾ ಯಾತ್ರೆಯನ್ನು ಸೋಮವಾರ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>