ಮುಂದುವರಿದು, ʼಆರೋಪಿಯಹೆಂಡತಿ ಮತ್ತು ಚಿಕ್ಕಮ್ಮ ಹಾಗೂ ಸಂತ್ರಸ್ತ ಅಮರೀಶ್ ಅವರ ಇಬ್ಬರು ಮಕ್ಕಳು ಊರಿನ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಎರಡೂ ಗುಂಪಿನವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಅಮರೀಶ್ ಹಾಗೂ ಗೌರವ್ ಸ್ಥಳಕ್ಕೆ ಬಂದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಅಮರೀಶ್ ಅವರತ್ತ ಗೌರವ್ ಗುಂಡು ಹಾರಿಸಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಾಳು ಅಮರೀಶ್ ಮೃತಪಟ್ಟಿದ್ದಾರೆʼ ಎಂದೂ ವಿವರಿಸಿದ್ದಾರೆ.