ನವದೆಹಲಿ: ನೈರುತ್ಯ ಮುಂಗಾರು ಸದ್ಯ ಸ್ವಲ್ಪ ಮಟ್ಟಿಗಿನ ಬಿಡುವು ನೀಡಿದ್ದು, ಜುಲೈ ಎರಡನೇ ವಾರದ ನಂತರ ದೇಶದಾದ್ಯಂತ ಮಳೆ ಚುರುಕುಗೊಳ್ಳುವ ಸಂಭವವಿದೆ.
ಜುಲೈ 2021ರಲ್ಲಿ ದೇಶದಾದ್ಯಂತ ವಾಡಿಕೆ ಮಳೆ ಸುರಿಯುವ ಸಂಭವವಿದೆ. ಇದು, ಸರಾಸರಿ ಮಳೆಯ ಶೇ 94–106ರಷ್ಟು ಇರುವ ಸಂಭವಗಳಿವೆ ಎಂದು ಭಾರತದ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಎಂ.ಮೊಹಾಪಾತ್ರ ಅವರು ತಿಳಿಸಿದ್ದಾರೆ.
ಜೂನ್ 19ರ ನಂತರ ಮುಂಗಾರು ಹಂಗಾಮಿನ ಮಳೆ ಚುರುಕುಗೊಂಡಿಲ್ಲ. ಆದರೂ, ಜೂನ್ ತಿಂಗಳಲ್ಲಿ ಸರಾಸರಿ ಮಳೆಗಿಂತಲೂ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. ಈ ಪೈಕಿ ಹೆಚ್ಚಿನ ಮಳೆಯು ಜೂನ್ 3 ಮತ್ತು 19ರ ನಡುವೆ ಆಗಿದೆ ಎಂದು ಅವರು ತಿಳಿಸಿದ್ದಾರೆ.