‘ಸಂತೋಷ್ ಶೆಹರ್ ಮತ್ತು ಆನಂದ್ ಜಾದವ್ ಎಂಬವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳನ್ನು ಜೂನ್ 11 ರಂದು ಉಪನಗರ ಮಲಾಡ್ನಲ್ಲಿ ಬಂಧಿಸಲಾಯಿತು. ಸದ್ಯ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಜೂನ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ’ ಎಂದು ಅವರು ಮಾಹಿತಿ ನೀಡಿದರು.