ನವದೆಹಲಿ: ‘ಹಿಂಸಾಚಾರದ ಎದುರುನಿರ್ಭಯದಿಂದ ನಿಲ್ಲುವುದನ್ನುಭಾರತವು ಮುಂದುವರಿಸಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಮಡಿದವರಿಗೆ ಗೌರವ ಸಲ್ಲಿಸಿಅವರು ಹೀಗೆ ಟ್ವೀಟ್ ಮಾಡಿದ್ದಾರೆ.
‘ಭಾರತವನ್ನು ರಕ್ಷಿಸಲು ಎಲ್ಲವನ್ನೂ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿ ನಮ್ಮ ದೇಶದ ಹೆಮ್ಮೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಮತ್ತು ಸಾಮಾನ್ಯ ಜನರಿಗೆ ಗೌರವ ಸಲ್ಲಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
2008ರ ನವೆಂಬರ್ 26ರಂದು ಪಾಕಿಸ್ತಾನ ಮೂಲದ ಲಷ್ಕರ್–ಎ–ತೊಯಬಾ ಸಂಘಟನೆಯ 10 ಉಗ್ರರು ಜಲಮಾರ್ಗದಿಂದ ಮುಂಬೈ ತಲುಪಿ ನಾಗರಿಕ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 16 ಭದ್ರತಾ ಸಿಬ್ಬಂದಿ, 26 ವಿದೇಶಿಯರು ಸೇರಿ 166 ಜನರು ಸಾವಿಗೀಡಾಗಿದ್ದರು.