ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ರಾಯಗಢದ ಸಿಜೆಎಂ ನ್ಯಾಯಾಧೀಶ ಎಸ್.ಡಬ್ಲ್ಯು ಉಗಳೆ ಅವರು, ಆರೋಪಿ ನೀಡಿದ ಹೇಳಿಕೆಯು ‘ವಿವಾದಾತ್ಮಕ ಮತ್ತು ರಾಜಕೀಯವಾಗಿ ಸಂವೇದನಾರಹಿತ’ ಎಂದು ಹೇಳಬಹುದು. ಕೇಂದ್ರ ಸಚಿವ ಸ್ಥಾನ ಹುದ್ದೆ ಅಲಂಕರಿಸಿರುವ ವ್ಯಕ್ತಿಯಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಆದರೆ ಲಭ್ಯವಿರುವ ದಾಖಲೆಗಳು ರಾಣೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪುಷ್ಠೀಕರಿಸುವುದಿಲ್ಲ. ಹಾಗಾಗಿ ಈ ಆರೋಪಗಳು ‘ಆಧಾರರಹಿತ’ ಎಂದು ಅವರನ್ನು ದೋಷ ಮುಕ್ತಗೊಳಿಸಿದರು.