ನವದೆಹಲಿ: ಆಮ್ಲಜನಕ ಕಾನ್ಸನ್ಟ್ರೇಟರ್ಗಳ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರ ದೆಹಲಿ ನ್ಯಾಯಾಲಯವು ಇದೇ 28ಕ್ಕೆ ಮುಂದೂಡಿದೆ.
ಕಾಲ್ರಾ ಒಡೆತನದ ಖಾನಾ ಚಾಚಾ, ಟೌನ್ ಹಾಲ್, ನೇಗಿ ಮತ್ತು ಜೂ ರೆಸ್ಟೊರೆಂಟ್ಗಳಿಂದ ಆಮ್ಲಜನಕ ಕಾನ್ಸನ್ಟ್ರೇಟರ್ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ನ್ಯಾಯಾಲಯವು ಕಾಲ್ರಾ ಅವರನ್ನು ಜೂನ್ 3ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವಾತಿ ಶರ್ಮಾ ಅವರು,‘ ಕಾಲ್ರಾ ಪರ ವಕೀಲರಾದ ವಿಶಾಲ್ ಗೋರಿ ಮನವಿ ಮೇರೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 28ರ ಮಧ್ಯಾಹ್ನ 12 ಗಂಟೆಗೆ ಮುಂದೂಡಿದ್ದಾರೆ.
ಮೇ 20 ಮತ್ತು 22 ರಂದು ಎರಡು ಬಾರಿ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತ್ತು.
ನವನೀತ್ ಕಾಲ್ರಾ ಅವರ ನ್ಯಾಯಾಂಗ ಬಂಧನವನ್ನು ಐದು ದಿನಗಳ ಕಾಲ ವಿಸ್ತರಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಮೇ 22 ರಂದು ತಿರಸ್ಕರಿಸಿತ್ತು.