ದಾಂತೇವಾಡ: ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ಒಬ್ಬ ಹತನಾಗಿದ್ದು, ಸ್ಥಳದಿಂದ 2 ಕೆ.ಜಿ. ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ), ದೇಸೀ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೀದಂ ಪೊಲೀಸ್ ಠಾಣೆ ವ್ಯಾಪ್ತಿಯ ಮುಸ್ತಲ್ನಾರ್ ಸಮೀಪ ಬೆಳಿಗ್ಗೆ 7.30ರ ಸುಮಾರಿಗೆ ಗುಂಡಿನ ದಾಳಿ ನಡೆಯಿತು. ಅರ್ಧ ಗಂಟೆ ನಡೆದ ಗುಂಡಿ ನ ಚಕಮಕಿಯ ಬಳಿಕ ರಾಮಚಂದ್ರ ಕರ್ತಿ (20) ಎಂಬಾತನ ಮೃತದೇಹ ಸ್ಥಳದಲ್ಲಿ ಪತ್ತೆಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.