ಪಂಜಾಬ್ನಲ್ಲಿ ‘ಸ್ಮಾರ್ಟ್ ಹಳ್ಳಿ ಅಭಿಯಾನ’ ಕಾರ್ಯಕ್ರಮವನ್ನು ಆನ್ಲೈನ್ ಮುಖಾಂತರ ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಮೂರು ಕೃಷಿ ಕಾನೂನುಗಳು ದೇಶದ ರೈತರ ಜೀವಾಳದ ಮೇಲಿನ ದಾಳಿಯಾಗಿದ್ದು, ಅವರ ರಕ್ತವನ್ನೇ ಹೀರಲಿದೆ. ಇದನ್ನು ದೇಶದ ರೈತರೂ ಅರ್ಥಮಾಡಿಕೊಂಡಿದ್ದಾರೆ. ಪಂಜಾಬ್ ಹಾಗೂ ಹರಿಯಾಣದಲ್ಲಿ ನಡೆದಂಥ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಈ ಕಾನೂನಿನ ಮೇಲಿದ್ದ ರೈತರ ಆಕ್ರೋಶ ಬಹಿರಂಗವಾಗಿತ್ತು’ ಎಂದರು.