ಉಷ್ಣ ವಿದ್ಯುತ್ ಸ್ಥಾವರಗಳಿಗೆ 2021ರ ಸೆಪ್ಟೆಂಬರ್ನಲ್ಲೂ ಸಚಿವಾಲಯ ಇಂಥದ್ದೇ ಸಲಹೆ ನೀಡಿತ್ತು. ಈ ಕುರಿತು 2022ರ ಜನವರಿ 18ರಂದು ಆದೇಶ ನೀಡಿದ್ದ ನ್ಯಾಯಮಂಡಳಿ, ‘ಪರಿಸರಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಆಗದಂತೆ ಬೂದಿಯನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಖರೀದಿದಾರರಲ್ಲಿ ಇಲ್ಲ. ಹಾರಾಜಿನ ಮೂಲಕ ಬೂದಿಯನ್ನು ಮಾರುವ ಸಲಹೆಯು ಬುದ್ಧಿಹೀನ. ಉತ್ತಮ ಬೂದಿ ಸಂಗ್ರಹಣ ವ್ಯವಸ್ಥೆ ಇರುವ ಖರೀದಿದಾರರಿಗೆ ಉಚಿತವಾಗಿ ನೀಡಿ’ ಎಂದಿತ್ತು.