ಪಿಎಂ ಕಿಸಾನ್ ಯೋಜನೆಯ ಅನುಷ್ಠಾನವನ್ನು ಸ್ಥಗಿತಗೊಳಿಸುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರವನ್ನು ಬಿಜೆಪಿ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿ,'ಕೃಷಿಕ್ ಬಂಧು ಅಡಿಯಲ್ಲಿ ಎಕರೆಗೆ ₹ 5,000 ನೀಡಿದರೆ, ಪಿಎಂ ಕಿಸಾನ್ ಅಡಿಯಲ್ಲಿ ಸರ್ಕಾರವು ಎಕರೆಗೆ ₹ 1,214 ನೀಡುತ್ತಿತ್ತು. ಕೃಷಿಕ್ ಬಂಧು ಯೋಜನೆಯು ಎಲ್ಲ ರೈತರನ್ನು ಒಳಗೊಳ್ಳುತ್ತದೆ. ಪಿಎಂ ಕಿಸಾನ್ ಯೋಜನೆಯಲ್ಲಿ 2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರಿಗೆ ಮಾತ್ರ ಅನುಕೂಲವಾಗಲಿದೆ' ಎಂದು ಅವರು ಹೇಳಿದರು.