ದೆಹಲಿಯಲ್ಲಿ ಹನುಮಾನ್ ಜಯಂತಿ, ಗುಜರಾತ್, ಮಧ್ಯಪ್ರದೇಶ ಮತ್ತ ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಆಚರಣೆ ವೇಳೆ ಘರ್ಷಣೆಗಳು ನಡೆದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಯೋಗಿ ಆದಿತ್ಯನಾಥ ಅವರು ಈ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಸಂಬಂಧ ರಾಜ್ಯದ ಹಿರಿಯ ಪೊಲೀಸರ ಜತೆಗೆ ಯೋಗಿ ಅವರು ಮಂಗಳವಾರ ಸಭೆ ನಡೆಸಿದರು.