<p><strong>ಗ್ವಾಲಿಯರ್</strong>: ದೇಶದಲ್ಲಿ ಗೋಧಿಯ ಕೊರತೆ ಇಲ್ಲ.ವಿದೇಶಕ್ಕೆಬೇಕಾಬಿಟ್ಟಿರಫ್ತಾಗುವುದನ್ನು ತಡೆಯಲು ರಫ್ತು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.</p>.<p>‘ದೇಶದಲ್ಲಿ ಗೋಧಿಯ ಕೊರತೆ ಇಲ್ಲ, ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು. ದೇಶೀಯ ಮಾರುಕಟ್ಟೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ಅಧಿಕ ಪ್ರಮಾಣದ ಗೋಧಿ ರಫ್ತು ತಡೆಯಲು ನಿಷೇಧ ಹೇರಲಾಗಿದೆ. ನಾವು ದೇಶದ ಜನರ ಬೇಡಿಕೆಯನ್ನು ಪೂರೈಸಬೇಕು’ ಎಂದು ಅವರು ಹೇಳಿದ್ದಾರೆ.</p>.<p>ಏರುತ್ತಿರುವ ಶಾಖದಿಂದ ಉತ್ಪಾದನೆ ಕುಂಠಿತವಾಗುವ ಕಳವಳದ ನಡುವೆ ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಗೋಧಿ ರಫ್ತುಗಳ ಮೇಲೆ ನಿಷೇಧವನ್ನು ಘೋಷಿಸಲಾಯಿತು ಎಂದು ಹೇಳಿದ್ದಾರೆ.</p>.<p>ವಿದೇಶಗಳಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿರುವುದರಿಂದ 2021–22ರ ಅವಧಿಯಲ್ಲಿ ಭಾರತದ ರಫ್ತು ಪ್ರಮಾಣವು ಸಾರ್ವಕಾಲಿಕ ದಾಖಲೆಯ 70 ಲಕ್ಷ ಟನ್ಗಳಷ್ಟಾಗಿತ್ತು. ಇದರ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದೆ.</p>.<p>ಭಾರತದ ಗೋಧಿ ರಫ್ತಿನ ಶೇಕಡ 50 ರಷ್ಟು ಬಾಂಗ್ಲಾದೇಶಕ್ಕೆ ಹೋಗುತ್ತದೆ.</p>.<p>‘ನಮ್ಮ ನೆರೆಯ ದೇಶಗಳು ನಮ್ಮ ಮೇಲೆ ಅವಲಂಬಿತವಾಗಿವೆ. ವಿಶ್ವದಾದ್ಯಂತ ಹಲವು ದೇಶಗಳು ಧಾನ್ಯಕ್ಕಾಗಿ ಭಾರತದತ್ತ ನೋಡುತ್ತವೆ. ನಮ್ಮ ನೆರೆಹೊರೆಯ ಬೇಡಿಕೆ ಪೂರೈಸುವ ಹೊಣೆಯೂ ನಮ್ಮ ಮೇಲಿದೆ’ ಎಂದು ತೋಮರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ವಾಲಿಯರ್</strong>: ದೇಶದಲ್ಲಿ ಗೋಧಿಯ ಕೊರತೆ ಇಲ್ಲ.ವಿದೇಶಕ್ಕೆಬೇಕಾಬಿಟ್ಟಿರಫ್ತಾಗುವುದನ್ನು ತಡೆಯಲು ರಫ್ತು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.</p>.<p>‘ದೇಶದಲ್ಲಿ ಗೋಧಿಯ ಕೊರತೆ ಇಲ್ಲ, ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು. ದೇಶೀಯ ಮಾರುಕಟ್ಟೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ಅಧಿಕ ಪ್ರಮಾಣದ ಗೋಧಿ ರಫ್ತು ತಡೆಯಲು ನಿಷೇಧ ಹೇರಲಾಗಿದೆ. ನಾವು ದೇಶದ ಜನರ ಬೇಡಿಕೆಯನ್ನು ಪೂರೈಸಬೇಕು’ ಎಂದು ಅವರು ಹೇಳಿದ್ದಾರೆ.</p>.<p>ಏರುತ್ತಿರುವ ಶಾಖದಿಂದ ಉತ್ಪಾದನೆ ಕುಂಠಿತವಾಗುವ ಕಳವಳದ ನಡುವೆ ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಗೋಧಿ ರಫ್ತುಗಳ ಮೇಲೆ ನಿಷೇಧವನ್ನು ಘೋಷಿಸಲಾಯಿತು ಎಂದು ಹೇಳಿದ್ದಾರೆ.</p>.<p>ವಿದೇಶಗಳಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿರುವುದರಿಂದ 2021–22ರ ಅವಧಿಯಲ್ಲಿ ಭಾರತದ ರಫ್ತು ಪ್ರಮಾಣವು ಸಾರ್ವಕಾಲಿಕ ದಾಖಲೆಯ 70 ಲಕ್ಷ ಟನ್ಗಳಷ್ಟಾಗಿತ್ತು. ಇದರ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದೆ.</p>.<p>ಭಾರತದ ಗೋಧಿ ರಫ್ತಿನ ಶೇಕಡ 50 ರಷ್ಟು ಬಾಂಗ್ಲಾದೇಶಕ್ಕೆ ಹೋಗುತ್ತದೆ.</p>.<p>‘ನಮ್ಮ ನೆರೆಯ ದೇಶಗಳು ನಮ್ಮ ಮೇಲೆ ಅವಲಂಬಿತವಾಗಿವೆ. ವಿಶ್ವದಾದ್ಯಂತ ಹಲವು ದೇಶಗಳು ಧಾನ್ಯಕ್ಕಾಗಿ ಭಾರತದತ್ತ ನೋಡುತ್ತವೆ. ನಮ್ಮ ನೆರೆಹೊರೆಯ ಬೇಡಿಕೆ ಪೂರೈಸುವ ಹೊಣೆಯೂ ನಮ್ಮ ಮೇಲಿದೆ’ ಎಂದು ತೋಮರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>