ಇದೇವೇಳೆ, ಲಖನೌದ ಶಿಯಾ ವಕ್ಫ್ ಮಂಡಳಿಯು ನೀಡಿರುವ ದೂರುಗಳ ತನಿಖೆಯನ್ನೂ ಇ.ಡಿ ನಡೆಸಲಿ ಎಂದಿದ್ದಾರೆ. ಈ ತರಹದ ದಾಳಿಗಳಿಂದಾಗಿ ನಾನು ಭಯಭೀತನಾಗುತ್ತೇನೆ ಎಂದು ಇ.ಡಿ ಅಧಿಕಾರಿಗಳು ಅಂದುಕೊಂಡಿದ್ದರೆ ಅದು ಅವರ ತಪ್ಪುಕಲ್ಪನೆ ಎಂದು ಅವರು ಹೇಳಿದ್ದಾರೆ. ನನ್ನ ವ್ಯವಹಾರಗಳ ದಾಖಲೆ ಜೊತೆ ಬಿಜೆಪಿ ಮುಖಂಡರ ದಾಖಲೆಗಳನ್ನೂ ಕಳುಹಿಸುತ್ತೇನೆ. ಇ.ಡಿ ಅವರ ಬಗ್ಗೆಯೂ ತನಿಖೆ ಮಾಡಲಿ ಎಂದಿದ್ದಾರೆ.