'ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಅಲ್ಲಿನ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಬಳಕೆ ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಮದಿಸಿದ ಆನೆಗಳಂತೆ ಆಡುತ್ತಾರೆ. ಅವರ ಮಾವುತರು ನವದೆಹಲಿಯಲ್ಲಿ ಕುಳಿತಿರುತ್ತಾರೆ. ಅಂತಹ ಮದ್ದಾನೆಗಳು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು, ಕಾನೂನು, ರಾಜಕೀಯ ಸಂಸ್ಕೃತಿಯನ್ನು ತುಳಿದು ಹಾಕುತ್ತವೆ. ಅಂತಹ ಕೆಲಸಗಳಿಗೆ ಅವರು ಆದ್ಯತೆ ನೀಡುತ್ತಾರೆ' ಎಂದು ಶಿವಸೇನಾ ಕಿಡಿಕಾರಿದೆ.